ADVERTISEMENT

ಸಂಗೀತದಿಂದ ಶಿವನೊಲುಮೆ ಸಾಧ್ಯ: ವಿದುಷಿ ಡಾ.ರೋಹಿಣಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 5:39 IST
Last Updated 13 ಮಾರ್ಚ್ 2021, 5:39 IST
ಬೆಳಗಾವಿಯಲ್ಲಿ ಭಾರತೀಯ ಗಾಯನ ಸಮಾಜದಿಂದ ಮಕ್ಕಳು ವಿದುಷಿ ಡಾ.ಕೆ.ಎಂ. ರೋಹಿಣಿ ಅವರಿಗೆ ಗುರುವಂದನೆ ಸಲ್ಲಿಸಿದರು
ಬೆಳಗಾವಿಯಲ್ಲಿ ಭಾರತೀಯ ಗಾಯನ ಸಮಾಜದಿಂದ ಮಕ್ಕಳು ವಿದುಷಿ ಡಾ.ಕೆ.ಎಂ. ರೋಹಿಣಿ ಅವರಿಗೆ ಗುರುವಂದನೆ ಸಲ್ಲಿಸಿದರು   

ಬೆಳಗಾವಿ: ‘ಸಂಗೀತದ ಮೂಲಕ ಪರಶಿವನೊಲುಮೆ ಸುಲಭ ಸಾಧ್ಯ’ ಎಂದು ಭಾರತೀಯ ಗಾಯನ ಸಮಾಜದ ಅಧ್ಯಕ್ಷೆ, ವಿದುಷಿ ಡಾ.ರೋಹಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ಸಭಾಂಗಣದಲ್ಲಿ ತಮ್ಮ ಶಿಷ್ಯ ವೃಂದವು ಈಚೆಗೆ ಮಹಾಶಿವರಾತ್ರಿ ನಿಮಿತ್ತ ಸಾದರಪಡಿಸಿದ ‘ಶಿವತತ್ವ ಪ್ರಸ್ತುತಿ’ (ನಾದಮಂತ್ರ ಶಿವೋಪಾಸನೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾರತೀಯರಿಗೆ ಶಿವನೇ ಪರಮೋಚ್ಛ ದೈವ. ಎಲ್ಲ ದೇವರುಗಳೂ ಈಶ್ವರನ ಸಗುಣಶಕ್ತಿಗಳಾಗಿವೆ. ಚೈತನ್ಯಾತ್ಮಕನಾದ ಪರಶಿವನ ಸಾತ್ವಿಕ ಗುಣ ಭಾರತೀಯರಲ್ಲಿದೆ. ಓಂಕಾರ ನಾದವು ಇಂದಿನ ಪ್ರಕ್ಷಬ್ದ ವಾತಾವರಣದಲ್ಲಿ ಮನುಷ್ಯರಲ್ಲಿ ಚೈತನ್ಯ ತುಂಬುತ್ತದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಭಕ್ತಿ ಸಂಗೀತದ ಸಂಸ್ಕಾರ ನೀಡುವ ಅಗತ್ಯವಿದೆ’ ಎಂದರು.

ADVERTISEMENT

ಮೂರು ವರ್ಷದ ಗಾಯಕಿ ಶ್ರೇಷ್ಠಾ ಕುರೇರ ಉದ್ಘಾಟಿಸಿದರು. ದಾಕ್ಷಾಯಿಣಿ ಹೂಗಾರ ಹಾಗೂ ಸಾವಿತ್ರಿ ಜಡಿಮಠ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. 36 ಮಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪನಿಷತ್ತು, ಭಾರತೀಯ ಭಾಷೆಗಳ ಶಿವ ಭಜನೆಗಳು ಹಾಗೂ ವಚನಗಳನ್ನು ಪ್ರಸ್ತುತಪಡಿಸಿದರು.

ಸತೀಶ ಗಚ್ಚಿ ತಬಲಾ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.