ADVERTISEMENT

ಬೆಳಗಾವಿ | ಮಾ.8ರಂದು ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 11:09 IST
Last Updated 5 ಮಾರ್ಚ್ 2024, 11:09 IST
<div class="paragraphs"><p> ಸುದ್ದಿಗೋಷ್ಠಿಯಲ್ಲಿ&nbsp;ಸಂಸ್ಥೆಯ ಕಾರ್ಯದರ್ಶಿ ವಿವೇಕ ಕುಲಕರ್ಣಿ,&nbsp;ಸದಸ್ಯ ಆರ್.ಎಸ್‌.ಮುತಾಲಿಕ, ಎಸ್‌.ವಿ.ಗಣಾಚಾರಿ, ವಿ.ಎಂ.ದೇಶಪಾಂಡೆ, ಎ.ಎಚ್.ಹವಾಲ್ದಾರ, ಸಂಯೋಜಕಿ ಅಶ್ವಿನಿ ಪರಬ್ ಇತರರಿದ್ದರು.</p></div>

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿವೇಕ ಕುಲಕರ್ಣಿ, ಸದಸ್ಯ ಆರ್.ಎಸ್‌.ಮುತಾಲಿಕ, ಎಸ್‌.ವಿ.ಗಣಾಚಾರಿ, ವಿ.ಎಂ.ದೇಶಪಾಂಡೆ, ಎ.ಎಚ್.ಹವಾಲ್ದಾರ, ಸಂಯೋಜಕಿ ಅಶ್ವಿನಿ ಪರಬ್ ಇತರರಿದ್ದರು.

   

ಬೆಳಗಾವಿ: ‘ಇಲ್ಲಿನ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಎಂ.ಕೆ.ನಂಬಿಯಾರ್ ಸ್ಮರಣಾರ್ಥ ಮಾರ್ಚ್‌ 8ರಿಂದ 10ರವರೆಗೆ 14ನೇ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆ ನಡೆಯಲಿದೆ’ ಎಂದು ಕಾರ್ಯದರ್ಶಿ ವಿವೇಕ ಕುಲಕರ್ಣಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘8ರಂದು ಸಂಜೆ 5.30ಕ್ಕೆ ಕೆಎಲ್‌ಎಸ್‌ ಪ್ಲಾಟಿನಮ್ ಜ್ಯುಬಿಲಿ ಕಟ್ಟಡದ ಕೆ.ಕೆ.ವೇಣುಗೋಪಾಲ ಆಡಿಟೋರಿಯಂನಲ್ಲಿ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಅನಿಲ ಕಟ್ಟಿ ಆಗಮಿಸುವರು. ವಕೀಲ ವಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸುವರು. 10ರಂದು ಸಂಜೆ 4ಕ್ಕೆ ಸಮಾರೋಪ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಯಾಗಿ ಹೈಕೋರ್ಟ್‌ನ ನ್ಯಾಯಾಧೀಶ ಇ.ಎಸ್.ಇಂದಿರೇಶ್ ಆಗಮಿಸುವರು. ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿ ಚೇರ್ಮನ್‌ ಪಿ.ಎಸ್‌. ಸಾವಕಾರ ಉಪಸ್ಥಿತರಿರುವರು’ ಎಂದರು.

ADVERTISEMENT

‘ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ತಮಿಳುನಾಡು, ಗೋವಾ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ 35 ತಂಡಗಳು ಹಾಗೂ 5 ರಾಷ್ಟ್ರೀಯ ಕಾನೂನು ಶಾಲೆಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಕಾನೂನು ಪರಿಣಿತರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹1,35,000 ಮೌಲ್ಯದ ಪ್ರಶಸ್ತಿಗಳನ್ನು ನೀಡಲಾಗುವುದು’ ಎಂದರು.

ಸಂಸ್ಥೆಯ ಸದಸ್ಯ ಆರ್.ಎಸ್‌.ಮುತಾಲಿಕ, ಎಸ್‌.ವಿ.ಗಣಾಚಾರಿ, ವಿ.ಎಂ.ದೇಶಪಾಂಡೆ, ಎ.ಎಚ್.ಹವಾಲ್ದಾರ, ಸಂಯೋಜಕಿ ಅಶ್ವಿನಿ ಪರಬ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.