ADVERTISEMENT

‘ಪಂಚಮಸಾಲಿ ಶ್ರೀಗಳ ಮಾತು ಗೌರವ ತರುವಂಥದ್ದಲ್ಲ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:44 IST
Last Updated 7 ನವೆಂಬರ್ 2020, 15:44 IST
ಈರಪ್ಪ ಬೆಳಕೂಡ
ಈರಪ್ಪ ಬೆಳಕೂಡ   

ಮೂಡಲಗಿ: ‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಬೆಂಬಲಿಸುತ್ತಿರುವುದು ಗೌರವ ತರುವಂಥದ್ದಲ್ಲ’ ಎಂದು ಪಂಚಮಸಾಲಿ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕಲ್ಲೋಳಿಯ ಈರಪ್ಪ ಬೆಳಕೂಡ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಸಮಾಜ ಪ್ರತಿನಿಧಿಸುವ ಸ್ವಾಮೀಜಿಗಳು ಎಲ್ಲರನ್ನೂ ಸಮನಾಗಿ ಕಾಣಬೇಕು. ರಾಜಕೀಯ ಮಾಡುವಂತಾದರೆ ಸ್ವಾಮೀಜಿಗಳಿಗೆ ಯಾವ ಬೆಲೆ ಬರುತ್ತದೆ?’ ಎಂದು ಕೇಳಿದ್ದಾರೆ.

‘ಸಿಬಿಐ ತನ್ನ ಕಾರ್ಯ ನಿರ್ವಹಿಸುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ, ಇಡೀ ಪಂಚಮಸಾಲಿ ಸಮಾಜವನ್ನು ವಿನಯ ಕುಲಕರ್ಣಿ ಅವರಿಗೆ ಅರ್ಪಿಸಿದಂತೆ ಮಾತನಾಡುವ ಸ್ವಾಮೀಜಿಗಳು ಸಮುದಾಯದ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ಕೊಲೆಯಾದ ಯೋಗೀಶಗೌಡ ಗೌಡರ ಕೂಡ ಸಮಾಜದವರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳದೆ, ಮಾಜಿ ಮಂತ್ರಿ ಎನ್ನುವ ಕಾರಣಕ್ಕೆ ವಿನಯ ಪರ ವಾದಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಸ್ವಾಮೀಜಿಗಳು ಯೋಚಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.