ADVERTISEMENT

ಬೊಲೆರೊ ಜೊತೆ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 14:22 IST
Last Updated 10 ಆಗಸ್ಟ್ 2019, 14:22 IST

ಬೆಳಗಾವಿ: ತಾಲ್ಲೂಕಿನ ವಿಟಿಯು ಸಮೀಪದ ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಮಂಗಳವಾರ ಸಂಜೆ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತ ದೇಹ ಶನಿವಾರ ಪತ್ತೆಯಾಗಿದೆ.

ಮೃತರನ್ನು ಪ್ರಸ್ತುತ ಗೋವಾದಲ್ಲಿದ್ದ ವಿಜಯವಾಡದ ರೈಲ್ವೆ ಗುತ್ತಿಗೆದಾರ ಜಯಚಂದ್ರ (37) ಎಂದು ಗುರುತಿಸಲಾಗಿದೆ.

‘ಅವರು ಬೊಲೆರೊ ವಾಹನದಲ್ಲಿ ಹೋಗುವಾಗ ಜೋರು ಮಳೆ ಬರುತ್ತಿತ್ತು. ಆದರೂ ರಸ್ತೆ ದಾಟಲು ಯತ್ನಿಸಿದ್ದರು. ಆಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದರು. ಶನಿವಾರ ವಿಟಿಯು ಹಿಂದಿನ ಹಳ್ಳದಲ್ಲಿ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ವಾಹನವನ್ನು ಜೆಬಿಸಿ ಬಳಸಿ ಮೇಲೆತ್ತಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ವಾರಸುದಾರರಿಗೆ ನೀಡಲಾಯಿತು’ ಎಂದು ತಿಳಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.