ADVERTISEMENT

ಗೋಕಾಕ: ಕೃತಿ ಪರಿಚಯ ಕಾರ್ಯಕ್ರಮ ಜ.28ರಂದು

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 6:54 IST
Last Updated 27 ಜನವರಿ 2022, 6:54 IST

ಗೋಕಾಕ: ಸಿರಿಗನ್ನಡ ವೇದಿಕೆ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ವತಿಯಿಂದ ಡಾ.ಸಿ.ಕೆ. ನಾವಲಗಿ ಅವರ ‘ಅಂಬಿಗರ ಚೌಡಯ್ಯನವರ ವಚನಗಳು’ ಕೃತಿ ಪರಿಚಯ ಕಾರ್ಯಕ್ರಮವನ್ನು ಜ.28ರಂದು ಸಂಜೆ 5ಕ್ಕೆ ನಗರದ ರಜನಿ ಜೀರಗ್ಯಾಳ ಅಮ್ಮಾಜಿ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ಬಿಇಒ ಜಿ.ಬಿ. ಬಳಗಾರ ಉದ್ಘಾಟಿಸಲಿದ್ದು, ವೈದ್ಯೆ ಡಾ.ಶಶಿಕಲಾ ಕಾಮೋಜಿ ಕೃತಿ ಕುರಿತು ಮಾತನಾಡಲಿದ್ದಾರೆ. ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ರಜನಿ ಜೀರಗ್ಯಾಳ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಈಶ್ವರ ಮಮದಾಪೂರ, ತಾಲ್ಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಗೀತಾ ಬನ್ನೂರ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಜಯಾ ಚುನಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT