ADVERTISEMENT

ಬೆಳಗಾವಿ: ಭತ್ತದೊಂದಿಗೆ ಮುಳುಗಿದ ಬದುಕು

ಪ್ರಸನ್ನ ಕುಲಕರ್ಣಿ
Published 27 ಸೆಪ್ಟೆಂಬರ್ 2020, 19:31 IST
Last Updated 27 ಸೆಪ್ಟೆಂಬರ್ 2020, 19:31 IST
ಮಹಾಂತೇಶ ರಾಹೂತ
ಮಹಾಂತೇಶ ರಾಹೂತ   

ಖಾನಾಪುರ: ತಾಲ್ಲೂಕಿನಲ್ಲಿ ಸತತ ಮಳೆಯಿಂದಾಗಿ ಜಾಂಬೋಟಿ ಮತ್ತು ಗುಂಜಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ.

ಸಾವರಗಾಳಿ, ಸಂಗರಗಾಳಿ, ಗುಂಜಿ, ಶಿರೋಲಿ, ನೇರಸಾ, ಗಂಗವಾಳಿ, ಹರೂರಿ, ತಿವೋಲಿ ಸೇರಿದಂತೆ ವಿವಿಧ ಗ್ರಾಮಗಳ 2 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಭತ್ತದ ಗದ್ದೆಗಳು ಜಲಾವೃತವಾಗಿದೆ. ಜೂನ್‌ನಲ್ಲಿ ಬಿತ್ತನೆಯಾಗಿದ್ದ ಭತ್ತ ಆಗಸ್ಟ್‌ ಮಧ್ಯ ಭಾಗದಲ್ಲಿ ಸುರಿದ ಜಡಿ ಮಳೆಯಿಂದಾಗಿ ತೊಂದರೆಗೀಡಾಗಿತ್ತು. ನಂತರ ಬಿಸಿಲು ಬಿದ್ದಿದ್ದರಿಂದ ಪೈರುಗಳು ಸುಧಾರಣೆ ಕಂಡಿದ್ದವು. ಆದರೆ ಈಗ ಮತ್ತೆ ಮಳೆ ಕಾಡಿದೆ. ಪರಿಣಾಮ ತೆನೆ ಕಟ್ಟುವ ಹಂತದಲ್ಲಿರುವ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ಹೇಳುತ್ತಾರೆ.

***

ADVERTISEMENT

ಹಂಗಾಮಿನಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ನಮಗೆ ಮತ್ತೆ ವರುಣಾರ್ಭಟದಿಂದ ಹಾನಿ ಭೀತಿ ಎದುರಾಗಿದೆ. ತಾಲ್ಲೂಕಿನ ಪ್ರಮುಖ ಬೆಳೆಯಾದ ಭತ್ತಕ್ಕೆ ರೋಗ ಬಾಧೆಯಿಂದ ತೊಂದರೆ ಆಗಲಿದೆ

-ಮಹಾಂತೇಶ ರಾಹೂತ, ರೈತ, ನಂದಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.