ADVERTISEMENT

ಶಿವರಾಜಗೆ ‘ಕವಿ ಭೂಷಣ’ ಪ್ರಶಸ್ತಿ 

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 3:12 IST
Last Updated 16 ಜನವರಿ 2026, 3:12 IST
ಶಿವರಾಜ ಕಾಂಬಳೆ
ಶಿವರಾಜ ಕಾಂಬಳೆ   

ಮೂಡಲಗಿ: ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಾಗರಮುನ್ನೋಳ್ಳಿಯ ಕವಿತ್ತ ಕರ್ಮಮಣಿ ಫೌಂಡೇಶನ್‌ದಿಂದ ‘ಕವಿ ಭೂಷಣ–2026’ ಪ್ರಶಸ್ತಿಯನ್ನು ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವರಾಜ ಕಾಂಬಳೆ ಅವರಿಗೆ ನೀಡಿ ಗೌರವಿಸಿದ್ದಾರೆ.

ಶಿವರಾಜ ಕಾಂಬಳೆ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವಿತೆಗಳನ್ನು ಓದಿ ಪ್ರಶಂಸೆ ಪಡೆದುಕೊಂಡಿದ್ದು, ‘ಅವ್ವ‘ ಕವನ ಸಂಕಲನವನ್ನು ಪ್ರಕಟಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT