ADVERTISEMENT

ಜೂಜಾಟ; ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:08 IST
Last Updated 11 ಜೂನ್ 2019, 16:08 IST

ಬೆಳಗಾವಿ: ಅಷ್ಟೆ ಗ್ರಾಮದ ಜನತಾ ಪ್ಲಾಟ್‌ಗಳ ಬಳಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಅಶೋಕ ಶಿವಾಜಿ ನಾಯ್ಕ (34) ಹಾಗೂ ಲಕ್ಷ್ಮಣ ಕಲ್ಲಪ್ಪ ಮೋದಗೆ (60) ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಎಸಿಪಿ (ಅಪರಾಧ) ಮಹಾಂತೇಶ್ವರ ಜಿದ್ದಿ, ಸಿಬ್ಬಂದಿಗಳಾದ ಐ.ಎಸ್. ಪಾಟೀಲ, ಎ.ಎಲ್. ಪಾಟೀಲ, ಎಸ್.ಬಿ ಪಾಟೀಲ, ಸುನೀಲ ಬಾಗಲಕೋಟ ಮತ್ತು ಜಿ.ಎಸ್ ನಾಡಗೌಡ ಅವರೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ ₹ 15,425 ನಗದು ವಶಪಡಿಸಿಕೊಂಡಿದ್ದಾರೆ. ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT