ADVERTISEMENT

ನಂಬಿಕೆಯಿಂದ ದೇವರನ್ನು ಪೂಜಿಸಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 6:21 IST
Last Updated 3 ಮಾರ್ಚ್ 2021, 6:21 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

*****

ನಂಬರು ನೆಚ್ಚರು ಬರಿದೆ ಕರೆವರು,

ADVERTISEMENT

ನಂಬಲರಿಯರೀ ಲೋಕದ ಮನುಜರು!

ನಂಬಿ ಕರೆದಡೆ ಓ ಎನ್ನನೆ ಶಿವನು?

ನಂಬದೆ ನೆಚ್ಚದೆ ಬರಿದೆ ಕರೆವರ

ಕೊಂಬ ಮೆಟ್ಟಿ ಕೂಗೆಂದ

ಕೂಡಲಸಂಗಮದೇವ!

ನಂಬಿಕೆ ಎನ್ನುವುದು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದುದು. ನಮ್ಮ ಜೀವನದ ಎಲ್ಲ ಸಂದರ್ಭಗಳಲ್ಲಿ ನಂಬಿಕೆಯಿಂದಲೆ ನಾವು ಬದುಕಬೇಕಾಗುತ್ತದೆ. ಪ್ರಸ್ತುತ ದಿನಮಾನದಲ್ಲಿ ಈ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ನಂಬಿದವರೇ ಗೋನ ಕೋಯ್ವರು ಎಂಬಂತೆ ಹತ್ತಿರದವರಿಂದಲೇ ಮೋಸಕ್ಕೆ ಒಳಗಾಗುತ್ತೇವೆ. ಪ್ರಸ್ತುತ ವಚನದಲ್ಲಿ
ಬಸವಣ್ಣನವರು ಭಗವಂತನ ಆರಾಧನೆಯನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವುದನ್ನು ತಿಳಿಸಿದ್ದಾರೆ.

ಜಗತ್ತಿನ ಜನರು ಭಗವಂತನನ್ನು ಆರಾಧಿಸುತ್ತಾರೆ. ಆದರೆ ಅವನ ಮೇಲೆ ಶ್ರದ್ಧೆ, ಭಕ್ತಿ, ನಂಬಿಕೆ ಇರುವುದಿಲ್ಲ. ಭಗವಂತನನ್ನು ಅರಿಯುವ ಮಾರ್ಗವೇ ಜನರಿಗೆ ಗೊತ್ತಿಲ್ಲ. ನಂಬಿಕೆಯಿಂದ ಪ್ರಾರ್ಥಿಸಿದರೆ ಭಗವಂತ ಒಲಿಯುವದಿಲ್ಲವೆ? ನಂಬದೆ, ನೆಚ್ಚದೆ ಭಗವಂತನನ್ನು ಆರಾಧಿಸಿದರೆ, ಅದು ಅಹಂಕಾರವನ್ನು ಮನದಲ್ಲಿ ಇಟ್ಟುಕೊಂಡು ಆರಾಧಿಸಿದಂತೆ ಆಗುತ್ತದೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ. ಅದನ್ನು ಪಾಲಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.