ADVERTISEMENT

ಬೆಳಗಾವಿ | ಕೆಎಲ್ಇ ಔಷಧ ವಿಜ್ಞಾನ ಕಾಲೇಜಿನಲ್ಲಿ ವನ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 15:27 IST
Last Updated 19 ಜೂನ್ 2020, 15:27 IST
ಬೆಳಗಾವಿಯ ಕೆಎಲ್ಇ ಔಷಧ ವಿಜ್ಞಾನ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕದಿಂದ ಈಚೆಗೆ ವನ ಮಹೋತ್ಸವ ಆಚರಿಸಲಾಯಿತು
ಬೆಳಗಾವಿಯ ಕೆಎಲ್ಇ ಔಷಧ ವಿಜ್ಞಾನ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕದಿಂದ ಈಚೆಗೆ ವನ ಮಹೋತ್ಸವ ಆಚರಿಸಲಾಯಿತು   

ಬೆಳಗಾವಿ: ಇಲ್ಲಿನ ಕೆಎಲ್ಇ ಔಷಧ ವಿಜ್ಞಾನ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕದಿಂದ ಈಚೆಗೆ ವನ ಮಹೋತ್ಸವ ಆಚರಿಸಲಾಯಿತು.

ಕಾಲೇಜಿನ ಆವರಣದಲ್ಲಿರುವ ‘ಸಂಜೀವಿನಿ’ ಔಷಧೀಯ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ನಾಂದಿ ಹಾಡಲಾಯಿತು.

ಪ್ರಾಚಾರ್ಯ ಡಾ. ಸುನೀಲ್ ಜಲಾಲಪುರೆ, ‘ಪ್ರತಿ ಬೋಧಕ ಸಿಬ್ಬಂದಿ ಒಂದೊಂದು ಸಸಿಗಳನ್ನು ದತ್ತು ಪಡೆದು ಅವುಗಳ ಪೋಷಣೆ ಹೊಣೆ ಹೊರಬೇಕು’ ಎಂದು ಸೂಚಿಸಿದರು.

ADVERTISEMENT

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಎನ್‌ಎಸ್‌ಎಸ್‌ ಸಂಯೋಜಕಿ ಡಾ.ಅಶ್ವಿನಿ ನರಸನ್ನವರ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಸಂಜಯ ಉಗಾರೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.