ನೇಸರಗಿ: ಬಡವರಾಗಿ ಹುಟ್ಟಿದ್ದು ತಪ್ಪಲ್ಲ. ಆದರೆ ಬಡವರಾಗಿ ಬದುಕುವುದು ತಪ್ಪು ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಮತದಾನ ಸಾಕ್ಷರತೆ ಅಭಿಯಾನ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಕ್ರೀಡೆ, ಸಾಂಸ್ಕೃತಿಕ, ಎನ್ ಎಸ್ಎಸ್ ವಿದ್ಯಾರ್ಥಿಗಳ ಸಂಘ, ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಬಡವರಾಗಿ ಹುಟ್ಟಿದವರು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಐಎಎಸ್, ಐಪಿಎಸ್, ವೈದ್ಯರಾಗಿ, ಅನೇಕ ಉನ್ನತ ಮಟ್ಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ವಿದ್ಯಾಭ್ಯಾಸ ಸಮಯದಲ್ಲಿ ಕಷ್ಟ ಪಟ್ಟು ಪರಿಶ್ರಮದ ವ್ಯಾಸಂಗ ಮಾಡಿ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ತಾವು ಕೂಡಾ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಒಳ್ಳೆಯ ಜೀವನ ನಡೆಸಬಹುದು ಎಂದರು.
ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಪ್ರಾಚಾರ್ಯ ಎನ್.ಎಂ. ಕುದರಿಮೋತಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಜಯರಾಜ ಎಸ್. ದರೂರ, ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡ್ರ, ಮಹಾಂತೇಶ್ ಸತ್ತಿಗೇರಿ, ಸುರೇಶ ಅಗಸಿಮನಿ, ಗೀತಾ ಕಂಡ್ರಿ, ಬಸವರಾಜ ಕಾರಜೋಳ, ಬಾಳಪ್ಪ ಕುಂಟಗಿ, ವಿನಾಯಕ ಮಾಸ್ತಮಾರ್ಡಿ, ಗಂಗಾಧರ ಮಾವಿನಕಟ್ಟಿ, ಬಾಬು ಬಾಗವಾನ, ಶ್ರೀಕಾಂತ್ ತರಗಾರ, ಎಸ್.ವಿ.ದೊಡಮನಿ, ಎಂ.ಎಸ್.ಬೆಟಗೇರಿ, ರೇಣುಕಾ ನಿಂಬಾಳ ಇದ್ದರು. ಚಂದ್ರಕಲಾ ರೊಟ್ಟಿ ನಿರೂಪಿಸಿದರು. ಸಂದ್ಯಾ ಕಟ್ಟಿಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.