ಬೆಳಗಾವಿ: ಇಟಲಿಯ ನಪೋಲಿಯಲ್ಲಿ ಜುಲೈ 3ರಿಂದ 14ರವರೆಗೆ ನಡೆಯಲಿರುವ ‘30ನೇ ಸಮ್ಮರ್ ಯೂನಿವರ್ಸಿಯಾಡ್–2019’ ಕೂಟದಲ್ಲಿ ಭಾಗವಹಿಸಿ, ಭಾರತ ತಂಡವನ್ನು ಪ್ರತಿನಿಧಿಸಲಿರುವ ವಿಟಿಯು ಕ್ರೀಡಾಪಟುಗಳಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಶುಭ ಹಾರೈಸಿ ಬೀಳ್ಕೊಟ್ಟರು.
ಬೆಂಗಳೂರಿನ ಆರ್ವಿ ಎಂಜಿನಿಯರಿಂಗ್ ಕಾಲೇಜಿನ ಅವಿನಾಶ್ ಮಣಿ, ಶಾಹಿಲ್ ಚೀಪ್ರಾ, ಕುಶಾಗ್ರ ರಾವತ್, ಮೀನಾಕ್ಷಿ, ಶಿವಾಣಿ ಕಟಾರಿಯಾ, ದಾಮಿನಿಗೌಡ, ಚಾಹತ್ ಆರೋರ, ಸಿದ್ಧಾಂತ್ ಸೇಜ್ವಲ್, ದನುಶ್ ಸುರೇಶ್ ತಂಡದಲ್ಲಿದ್ದಾರೆ.
ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೈ.ಎಚ್. ರಾಜೇಶ್, ತಂಡದ ವ್ಯವಸ್ಥಾಪಕ ಡಾ.ಎಂ. ಶಿವರಾಮರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.