ADVERTISEMENT

ನೀರಿನ ಸಮಸ್ಯೆ: ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:00 IST
Last Updated 7 ಡಿಸೆಂಬರ್ 2018, 17:00 IST
ಕುಡಿಯುವ ನೀರು ಪೂರೈಸುವಂತೆ ಪೌರಾಯುಕ್ತ ದೀಪಕ ಹರದಿ ಅವರಿಗೆ ನಾಗರಿಕರು ಮನವಿ ಸಲ್ಲಿಸಿದರು
ಕುಡಿಯುವ ನೀರು ಪೂರೈಸುವಂತೆ ಪೌರಾಯುಕ್ತ ದೀಪಕ ಹರದಿ ಅವರಿಗೆ ನಾಗರಿಕರು ಮನವಿ ಸಲ್ಲಿಸಿದರು   

ನಿಪ್ಪಾಣಿ: ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಇಲ್ಲಿನ ಆಶ್ರಯ ನಗರದಲ್ಲಿಯ ಮಹಿಳೆಯರು ಶುಕ್ರವಾರ ನಿರಂತರ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರ ಜೈನ್‌ ಇರ್ರಿಗೇಶನ್‌ ಕಂಪನಿಯ ಕಾರ್ಯಾಲಯಕ್ಕೆ ಬೀಗ ಹಾಕಲು ಮುಂದಾದರು.

ಆಶ್ರಯ ನಗರದಲ್ಲಿನ 3ನೇ ಮತ್ತು 4ನೇ ಗಲ್ಲಿಯಲ್ಲಿ ಕಳೆದ ಭಾನುವಾರ ತುಸು ಹೊತ್ತು ನೀರು ಪೂರೈಕೆ ಮಾಡಲಾಗಿತ್ತು. ಅದರ ನಂತರ ನೀರು ಪೂರೈಕೆ ಮಾಡದೇ ಇದ್ದ ಪರಿಣಾಮ ಸ್ಥಳೀಯರು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದರಿಂದ ಮಹಿಳೆಯರು ಮೆರವಣಿಗೆ ಮೂಲಕ ಗುತ್ತಿಗೆದಾರರ ಕಾರ್ಯಾಲಯಕ್ಕೆ ಬಂದು ಬೀಗ ಜಡಿಯಲು ಪ್ರಯತ್ನಿಸಿದರು.

ನಂತರ ಕಂಪನಿಯ ಅಧಿಕಾರಿಗಳು ನೀರು ಪೂರೈಕೆ ಮಾಡಿದರು. ಸ್ಥಳೀಯ ನಗರಸಭೆ ಪೌರಾಯುಕ್ತರಿಗೂ ಈ ಕುರಿತು ನಾಗರಿಕರು ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ರೇಖಾ ಕೋಳಿ, ಶೋಭಾ ಕಡಗಾವೆ, ಛಾಯಾ ಭಾಟಲೆ, ರಾಹುಲ ಭಾಟಲೆ, ಸದ್ದಾಂ ಖಾನಾಪುರೆ, ಶಂಕರ ಭಾಟಲೆ, ಪಿಂಟು ಪಠಾಡೆ, ಅಜೀತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.