ಬೆಳಗಾವಿ: ನವೀಕರಿಸಬಹುದಾದ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಹೇಳಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮಾನವನ ದುರಾಸೆಪರಿಸರದ ಸಮಸ್ಯೆಗಳಿಗೆ ಕಾರಣ. ಹೆಚ್ಚುತ್ತಿರುವ ನಮ್ಮ ಬೇಡಿಕೆಗಳು ನಿಸರ್ಗವನ್ನು ನಾಶಪಡಿಸುತ್ತಿವೆ’ ಎಂದು ವಿಷಾದಿಸಿದರು.
‘ನೀರು ಪ್ರಕೃತಿದತ್ತವಾಗಿ ಮಾನವನಿಗೆ ದೊರೆತ ಅತ್ಯಮೂಲ್ಯ ಸಂಪನ್ಮೂಲವಾಗಿದೆ. ಅದನ್ನು ಮಿತವಾಗಿ ಬಳಸಬೇಕು ಹಾಗೂ ಭವಿಷ್ಯಕ್ಕಾಗಿಯೂ ಸಂರಕ್ಷಿಸಬೇಕು. ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರ ಶಕ್ತಿ, ಜಲ ಶಕ್ತಿ, ಜೈವಿಕ ಇಂಧನದ ಅವಲಂಬನೆ ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಪ್ರದೀಪ ಪಟ್ಟಣಶೆಟ್ಟಿ ಮಾತನಾಡಿ, ‘ಸೌರಶಕ್ತಿ ಬಳಕೆಗೆ ದೇಶದಲ್ಲಿ ಬಹಳಷ್ಟು ಅವಕಾಶಗಳಿವೆ’ ಎಂದರು.
ವಿಟಿಯು ಅಧಿಕಾರಿ ಡಾ.ಚಿದಾನಂದ ಗವಿಮಠ ಮಾತನಾಡಿದರು. ಆಶ್ರಯ ಸ್ವಧಾರ ಗೃಹದ ಸೂಪರಿಂಟೆಂಡೆಂಟ್ ರಾಧಿಕಾ ಬಡಿಗೇರ ಸ್ವಾಗತಿಸಿದರು. ಮಲ್ಲಪ್ಪ ಮಾನಗಾಂವಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.