ADVERTISEMENT

ಅಡೆತಡೆ ಸಹಿಸಿಕೊಂಡು ಬೆಳೆಯಬೇಕು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:00 IST
Last Updated 1 ಅಕ್ಟೋಬರ್ 2012, 19:00 IST

ಕೆಂಗೇರಿ: ಸಾರ್ವಜನಿಕ ಕೊಂದು ಕೊರತೆಗಳನ್ನು ಜನ ಪ್ರತಿನಿಧಿಗಳಿಗೆ ನೇರವಾಗಿ ಗಮನಕ್ಕೆ ತರುವ ಉದ್ದೇಶದಿಂದ ಮಲ್ಲತ್ತಹಳ್ಳಿ ಬಾಲಗಂಗಾಧರ ನಗರದಲ್ಲಿ `ಯುವ ಅಲೆ~ ಎಂಬ ಸಂಸ್ಥೆಯನ್ನು ರಾಜರಾಜೇಶ್ವರಿ ನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, `ಸಂಸ್ಥೆಯ ಉದ್ದೇಶ ಉತ್ತಮವಾಗಿದೆ. ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಎದುರಾಗುವ ಅಡೆ ತಡೆಗಳನ್ನು ಸಹಿಸಿಕೊಂಡು ಬೆಳೆಯಬೇಕು~ ಎಂದರು. ಪಾಲಿಕೆ ಸದಸ್ಯ ಗೋವಿಂದರಾಜು, ಕಾಂಗ್ರೆಸ್‌ನ ಯುವ ಮುಖಂಡ ನಟರಾಜುಗೌಡ, ಮುಖಂಡ ಕಾಳೇಗೌಡ, ಸಂಸ್ಥೆಯ ಮೋಹನ್ ಗೌಡ, ಅನಿಲ್ ಕುಮಾರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.