ADVERTISEMENT

ಅಪವಿತ್ರ ಮೈತ್ರಿಯಿಂದ ಸಮಸ್ಯೆ ಕಗ್ಗಂಟು?

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:50 IST
Last Updated 20 ಅಕ್ಟೋಬರ್ 2012, 19:50 IST

ಬೆಂಗಳೂರು:  ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಕೆಳಹಂತದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರ ನಡುವಿನ ಅಪವಿತ್ರ ಮೈತ್ರಿ ಪರಿಣಾಮದಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎನ್ನುವ ಅನುಮಾನವನ್ನು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

`ಮೂಲದಲ್ಲೇ ಕಸ ಬೇರ್ಪಡೆ ಹಾಗೂ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಸಮಂಜಸವಾಗಿ ನಡೆಯದಿರಲು ಈ ಬಾಂಧವ್ಯವೇ ಕಾರಣ. ಮೂಲದಲ್ಲೇ ಕಸ ಪ್ರತ್ಯೇಕ ಮಾಡುವ ಪ್ರಕ್ರಿಯೆಗೆ ಉತ್ತೇಜನ ನೀಡಲು ಸಚಿವರು, ಶಾಸಕರು ಏಕೆ ಮುಂದಾಗುತ್ತಿಲ್ಲ~ ಎಂದು ಪ್ರಶ್ನಿಸಿರುವ ಅವರು, `ವಾರ್ಡ್‌ಮಟ್ಟದ ಎಂಜಿನಿಯರ್‌ಗಳಿಗೂ ಈ ವಿಷಯವಾಗಿ ಆಸಕ್ತಿ ಇಲ್ಲ. ಕೆಲವು ನಾಗರಿಕ ಸಂಘಟನೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾತ್ರ ಕಸ ಬೇರ್ಪಡೆ ಕುರಿತಂತೆ ಜಾಗೃತಿ ಮೂಡಿಸಲು ಯತ್ನಿಸುತ್ತಿವೆ~ ಎಂದು ಹೇಳಿದ್ದಾರೆ.

`ಕಸ ಒಯ್ದು ಸುರಿಯುವಲ್ಲಿ ದೊಡ್ಡ ಪ್ರಮಾಣದ ಹಣ ಹೂಡಿಕೆ ಆಗುತ್ತಿರುವುದೇ ಇಂತಹ ಕಾನೂನುಬಾಹಿರ ಬಾಂಧವ್ಯಕ್ಕೆ ಕಾರಣವಾಗಿದೆ~ ಎಂದು ಅವರು ದೂರಿದ್ದಾರೆ. `ಬಿಬಿಎಂಪಿ ಪ್ರತಿವರ್ಷ ತ್ಯಾಜ್ಯ ವಿಲೇವಾರಿಗಾಗಿ ರೂ 450 ಕೋಟಿ ಖರ್ಚು ಮಾಡುತ್ತಿದ್ದು, ಅದರಲ್ಲಿ 300 ಕೋಟಿ ಮೊತ್ತವನ್ನು ಕೇವಲ ಸಾಗಾಟಕ್ಕಾಗಿ ವ್ಯಯಿಸಲಾಗುತ್ತದೆ. ಪಾಲಿಕೆ ದಾಖಲೆಗಳ ತನಿಖೆ ಮಾಡಿದರೆ ಕನಿಷ್ಠ ಪಕ್ಷ ಅರ್ಧದಷ್ಟು ನಕಲಿ ಬಿಲ್‌ಗಳು ಸಿಗುತ್ತವೆ~ ಎಂದು ಅವರು ಹೇಳಿದ್ದಾರೆ.

ಚುನಾವಣಾ ವರ್ಷ ಸಮೀಪಿಸಿದ್ದರಿಂದ ಹಣ ಮಾಡಲು ಹಲವು ರಾಜಕಾರಣಿಗಳಿಗೆ ತ್ಯಾಜ್ಯ ವಿಲೇವಾರಿ ಒಂದು ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.