ADVERTISEMENT

‘ಅಳಿವಿನ ಅಂಚಿನಲ್ಲಿರುವ ಭಾಷೆ ಉಳಿಸಿ: ಜಿ.ಡಿ. ಚಿತ್ತಣ್ಣ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
‘ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ’ ಕುರಿತ ವಿಚಾರ ಸಂಕಿರಣದಲ್ಲಿ ನ್ಯಾಷನಲ್ ಕಾಲೇಜಿನ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ ಅವರು ಕಾ.ತ.ಚಿಕ್ಕಣ್ಣ ಅವರೊಂದಿಗೆ ಮಾತನಾಡಿದರು, ಬಂಜಗೆರೆ ಜಯಪ್ರಕಾಶ್ (ಎಡ) ಅವರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
‘ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ’ ಕುರಿತ ವಿಚಾರ ಸಂಕಿರಣದಲ್ಲಿ ನ್ಯಾಷನಲ್ ಕಾಲೇಜಿನ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ ಅವರು ಕಾ.ತ.ಚಿಕ್ಕಣ್ಣ ಅವರೊಂದಿಗೆ ಮಾತನಾಡಿದರು, ಬಂಜಗೆರೆ ಜಯಪ್ರಕಾಶ್ (ಎಡ) ಅವರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕರ್ನಾಟಕದಲ್ಲಿ 179ಕ್ಕೂ ಹೆಚ್ಚು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಭಾಷೆ ನಶಿಸಿದರೆ ಅದರೊಂದಿಗೆ ಆ ಜನಾಂಗದ ಸಂಸ್ಕೃತಿಯೂ ನಾಶ
ವಾಗುತ್ತದೆ’ ಎಂದು ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಜಿ.ಡಿ ಚಿತ್ತಣ್ಣ ಅಭಿಪ್ರಾಯಪಟ್ಟರು.

ನ್ಯಾಷನಲ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ’ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಕರ್ನಾಟಕದಲ್ಲಿ ಕೊರಗ ಭಾಷೆ ನಶಿಸುವ ಹಂತದಲ್ಲಿದೆ. ಯುವಜನರು ಈ ರೀತಿಯ ಚಿಂತನೆಗಳನ್ನು ತಲೆಗೆ ಹಚ್ಚಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ
ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

ಲೇಖಕ ಕೋಟಿಗಾನಹಳ್ಳಿ ರಾಮಯ್ಯ, ‘ದೇಶ ಹಾಗೂ ಸಮುದಾಯ ಕದಡಿದ ನೀರಿನಂತಾಗಿದೆ. ಇದಕ್ಕೆ ಇಂದಿನ ಜಾಗತೀಕರಣ, ಧಾರ್ಮಿಕ ಸಂರಚನೆ ಹಾಗೂ ರಾಜಕೀಯ ಕಾರಣಗಳು ಇರಬಹುದು. ನಮ್ಮದು ಗುರುತು ರಾಜಕಾರಣದ ಅಕ್ಷರಸ್ಥ ತಲೆಮಾರು.
ಈ ದಿನಗಳಲ್ಲಿ ಅಸ್ಪೃಶ್ಯೇತರ ನೆಲೆಗಳು ಬೀಜ ಸತ್ವ ಕಳೆದುಕೊಂಡಿವೆ’ ಎಂದರು.

‘ಪದಗಳ ವ್ಯತ್ಯಾಸವನ್ನು ಜಾಣ್ಮೆ ಯಿಂದ ರಾಜಕೀಯಕ್ಕೆ ಬಳಸಲಾಗುತ್ತಿದೆ. ‘ಆದಿವಾಸಿ‘ ಎನ್ನುವ ಪದದಲ್ಲಿ ಇರುವ ತೂಕ ‘ವನವಾಸಿ’ ಎಂದು ಹೇಳು
ವುದರಲ್ಲಿ ಇಲ್ಲ. ಆರ್‌ಎಸ್‌ಎಸ್‌ ವಿಚಾರಧಾರೆಯಲ್ಲಿ ‘ವನವಾಸಿ‘ ಎಂಬ ಪದಹುಟ್ಟಿಕೊಂಡಿದೆ. ಕಾಡಿನಲ್ಲಿ ವಾಸಿಸುವುದಕ್ಕೂ ಕಾಡಿನಲ್ಲಿಯೇ ಅನಾದಿ ಕಾಲದಿಂದ ಇರುವುದಕ್ಕೂ ವ್ಯತ್ಯಾಸ ಇಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಇದರಂತೆಯೇ ಎಡೆಸ್ನಾನ ಹಾಗೂ ಮಡೆಸ್ನಾನ ಪದಗಳ ಬಳಕೆಯನ್ನೂ ನಾವು ಗಮನಿಸಬಹುದು. ಎರಡೂ ಪದಗಳಲ್ಲಿ ತಾತ್ವಿಕ ಹಾಗೂ ರಾಜಕೀಯ ಬದಲಾವಣೆಗಳು ಇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.