ADVERTISEMENT

ಆದೇಶ ಆರ್‌ಟಿಐ ವ್ಯಾಪ್ತಿಗೆ ಆನಂದ ಸೋಷಿಯಲ್ ಎಜುಕೇಶನಲ್ ಟ್ರಸ್ಟ್

ಮಾಹಿತಿ ಆಯೋಗ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಬೆಂಗಳೂರು:  ನಗರದ ಕಾಡುಗೊಂಡನಹಳ್ಳಿಯ ಆನಂದ ಸೋಷಿಯಲ್ ಹಾಗೂ ಎಜುಕೇಶನಲ್ ಟ್ರಸ್ಟ್ ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ವ್ಯಾಪ್ತಿಗೆ ಒಳಪಡುತ್ತದೆ ಎಂದು ಕರ್ನಾಟಕ ಮಾಹಿತಿ ಆಯೋಗ ಆದೇಶ ನೀಡಿದೆ.

ಸಂಸ್ಥೆ ಮಾಹಿತಿ ನೀಡಲು ನಿರಾಕರಿಸುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಯೋಗ ಈ ಆದೇಶ ಹೊರಡಿಸಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಸಂಸ್ಥೆ ನೇಮಿಸಿಕೊಳ್ಳಬೇಕು.

ಬಳಿಕ ಸಂಸ್ಥೆಯು 30 ದಿನಗಳೊಳಗೆ ಅರ್ಜಿದಾರರಿಗೆ ಉಚಿತವಾಗಿ ಮಾಹಿತಿ ಒದಗಿಸಬೇಕು ಎಂದು ಮಾಹಿತಿ ಆಯುಕ್ತ ಡಾ.ಶೇಖರ್ ಡಿ.ಸಜ್ಜನರ್ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT