ADVERTISEMENT

ಆದೇಶ ರದ್ದು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:19 IST
Last Updated 4 ಮಾರ್ಚ್ 2014, 19:19 IST

ಬೆಂಗಳೂರು: ವೈಯಾಲಿ­ಕಾವಲ್‌ ಗೃಹ­ನಿರ್ಮಾಣ ಸಹಕಾರ ಸಂಘವು ನಾಗ­ವಾರ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದ 165 ಎಕರೆ ಜಮೀ­ನನ್ನು ಮೂಲ ಮಾಲೀಕ­ರಿಗೆ ಮರಳಿಸ­ಬೇಕು ಎಂದು ಸರ್ಕಾರ 2013ರ ಜೂನ್‌­­­ನಲ್ಲಿ ಹೊರಡಿಸಿದ ಆದೇಶವನ್ನು ಹೈಕೋರ್ಟ್‌ ಮಂಗಳ­ವಾರ ರದ್ದುಪಡಿಸಿದೆ.

‘ಈ ಬಡಾವಣೆ ನಿರ್ಮಾಣಕ್ಕೆ ಗುರುತಿ­­ಸ­­ಲಾದ 165 ಎಕರೆ ಜಮೀನಿನ ಪೈಕಿ ಒಟ್ಟು 52.30 ಎಕರೆ ಜಮೀನನ್ನು ಮಾತ್ರ ಮೂಲ ಮಾಲೀಕರಿಗೆ ನೀಡ­ಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಆದೇಶ ಪಾಲಿಸಿರುವ ಕುರಿತು ಸುಪ್ರೀಂ ಕೋರ್ಟ್‌ಗೆ ಹೇಳಿಕೆ­ಯನ್ನೂ ಸಲ್ಲಿಸಲಾಗಿದೆ. ಅಲ್ಲಿ ಇದರ ವಿಚಾರಣೆ ಬಾಕಿ ಇದೆ. ಈ ಸಂದರ್ಭ­ದಲ್ಲಿ ಸಂಪೂರ್ಣ ಜಮೀನು ಮರಳಿಸು­ವಂತೆ ಹೇಳುವುದು ಸರಿಯಲ್ಲ’ ಎಂದು ಸಂಘ ವಾದಿಸಿತ್ತು.
ವಿಚಾರ ಸುಪ್ರೀಂ ಕೋರ್ಟ್‌ ಮುಂದಿ­ರು­­­­ವಾಗ, ಸರ್ಕಾರ ಹೀಗೆ ಆದೇಶ ಹೊರ­ಡಿ­­ಸಿದ್ದು ತರಾತುರಿಯ ಕ್ರಮ. ಇದು ಸರಿಯಲ್ಲ ಎಂದು ಹೇಳಿರುವ ನ್ಯಾಯ­ಮೂರ್ತಿ ಆನಂಧ ಬೈರಾರೆಡ್ಡಿ ಅವರ ಪೀಠ, ಅರ್ಜಿ ಮಾನ್ಯ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.