ADVERTISEMENT

ಇಂದಿರಾ ಕ್ಯಾಂಟಿನ್‌ಗೆ ಕಲ್ಲು

ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಇಂದಿರಾ ಕ್ಯಾಂಟಿನ್‌ಗೆ ಕಲ್ಲು
ಇಂದಿರಾ ಕ್ಯಾಂಟಿನ್‌ಗೆ ಕಲ್ಲು   

ಬೆಂಗಳೂರು: ನಗರದ ಅತ್ತಿಗುಪ್ಪೆಯ ಬಿಬಿಎಂಪಿ ವಾರ್ಡ್‌ ಸಂಖ್ಯೆ 132ರಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿ ಪರಾರಿಯಾಗಿರುವ ಪ್ರಕರಣ ಭಾನುವಾರ ನಡೆದಿದೆ.

‘ಕಲ್ಲು ಸಂಗ್ರಹಿಸಿಕೊಂಡು ಬಂದಿದ್ದ ಅಪರಿಚಿತರು ಕಾರಿನೊಳಗೆ ಕುಳಿತುಕೊಂಡೇ ಕ್ಯಾಂಟಿನ್‌ನತ್ತ ಕಲ್ಲು ಬೀಸಿದ್ದಾರೆ. ಕಲ್ಲಿನ ಏಟಿಗೆ ಕ್ಯಾಂಟಿನ್‌ನ ಕಿಟಕಿಯ ಗಾಜು ಪುಡಿಯಾಗಿದೆ. ಈ ಸಂದರ್ಭದಲ್ಲಿ ಕ್ಯಾಂಟಿನ್‌ ಸಿಬ್ಬಂದಿ ಒಳಗೆ ಇದ್ದರು. ಆದರೆ, ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ‘ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಾರಿನೊಳಗೆ ನಾಲ್ಕರಿಂದ ಐದು ಜನ ಕುಳಿತುಕೊಂಡಿದ್ದನ್ನು ಸಿಬ್ಬಂದಿ ನೋಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕ್ಯಾಂಟಿನ್‌ ಮತ್ತು ಅಡುಗೆ ಕೆಲಸ ಮಾಡುವವರಿಗೆ ಶನಿವಾರ ರಜೆ ನೀಡಿದ್ದರಿಂದ ಭಾನುವಾರವಷ್ಟೇ ಕ್ಯಾಂಟಿನ್‌ ಆರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.