ಬೆಂಗಳೂರು: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಎರಡು ಬಿಎಚ್ಕೆ ಸುಸಜ್ಜಿತ ಮನೆ ಕಟ್ಟಿಸಿಕೊಡಲಿದ್ದೇವೆ’ ಎಂದು ಸಾಮಾನ್ಯ ಜನತಾ ಪಾರ್ಟಿ ಅಧ್ಯಕ್ಷ ಪ್ರವೀಣ್ ನಾಯಕ್ ಹೇಳಿದರು.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದರು.
ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು
* ರಾಜ್ಯದ ಪ್ರತಿ ಪ್ರಜೆಯ ಬ್ಯಾಂಕ್ ಖಾತೆಗೆ ₹25 ಸಾವಿರ
* ಎಲ್ಲರಿಗೂ ಸುಸಜ್ಜಿತ ಎರಡು ಬಿಎಚ್ಕೆ ಮನೆ
* ರೈತರಿಗೆ ಒಂದು ಎಕರೆಗೆ ₹10 ಸಾವಿರ ಸಹಾಯ
* ಸಹಕಾರ ಸಂಘದಲ್ಲಿ ಇದುವರೆಗೂ ಪಡೆದುಕೊಂಡಿರುವ ಸಾಲ ಮನ್ನಾ
* ಭೂಮಿ ಇಲ್ಲದ ಪರಿಶಿಷ್ಟ ಜಾತಿ ಕುಟುಂಬಕ್ಕೆ 3 ಎಕರೆ ಹಾಗೂ ಸಾಮಾನ್ಯ ವರ್ಗದ ರೈತರಿಗೆ 2 ಎಕರೆ ಜಮೀನು ಮಂಜೂರು
* ಪ್ರತಿ ಗ್ರಾಮದಲ್ಲಿ ಎರಡು ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ಪದವಿ ವಿದ್ಯಾರ್ಥಿಗಳು ಪ್ರವೇಶಾತಿ ಸಂದ
ರ್ಭದಲ್ಲಿ ನೀಡಿದ ಶುಲ್ಕ ಮರುಪಾವತಿ
* ಒಬ್ಬ ವಿದ್ಯಾರ್ಥಿ ಇದ್ದರೂ ಸರ್ಕಾರಿ ಶಾಲೆ ಮುಚ್ಚದಿರಲು ಆದೇಶ
* ದ್ವಿತೀಯ ಪಿಯು ಮತ್ತು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಮತ್ತು ಐಪ್ಯಾಡ್
* ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಪ್ರಯಾಣ ದರ ಕಡಿತ
* ಮಹಿಳೆಯರಿಗೆ ಪ್ರತಿ ತಿಂಗಳು ₹ 1,000 ಗೌರವಧನ
* ವಿಧವೆಯರನ್ನು ಮದುವೆಯಾಗುವವರಿಗೆ ₹1ಲಕ್ಷ ಸಹಾಯಧನ
* ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.