ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಪರ ಪ್ರಚಾರಕ್ಕೆ ಬಂದಿದ್ದ ಅಸಾದುದ್ದೀನ್ ಒವೈಸಿ ಭಾಷಣಕ್ಕೆ ಶುಕ್ರವಾರ ಪೊಲೀಸರು ತಡೆ ಒಡ್ಡಿದರು.
ಗೋರಿಪಾಳ್ಯದಲ್ಲಿ ಭಾಷಣ ಮಾಡಲು ಒವೈಸಿ ವೇದಿಕೆ ಏರಿದಾಗ ರಾತ್ರಿ 10 ಗಂಟೆ ಕಳೆದಿತ್ತು. ಚುನಾವಣಾ ನೀತಿ ಸಂಹಿತೆಯ ಪ್ರಕಾರ ರಾತ್ರಿ 10 ರೊಳಗೆ ಪ್ರಚಾರ ಕಾರ್ಯ ಮುಗಿಸಬೇಕು. ಭಾಷಣ ಮಾಡಲು ಅವಕಾಶ ನೀಡದೇ ಒವೈಸಿಯನ್ನು ವೇದಿಕೆಯಿಂದ ಇಳಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.