ADVERTISEMENT

ಕೆಂಪಮ್ಮ ದೇವಿ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ನೆಲಮಂಗಲ: ಪಟ್ಟಣದ ಕೆರೆ ಹಿಂಭಾಗದ ಎಲೆ ತೋಟದ ಕೆಂಪಮ್ಮ ದೇವಿಯ ಕರಗ ಮಹೋತ್ಸವ ಮೇ 13ರಂದು ಸಂಜೆ ನಡೆಯಲಿದೆ ಎಂದು ಪ್ರಧಾನ ಅರ್ಚಕ ವೆಂಕಟಪ್ಪ ತಿಳಿಸಿದ್ದಾರೆ. 5ರಿಂದಲೇ ಉತ್ಸವದ ವಿವಿಧ ಪೂಜಾ ವಿಧಿಗಳು, ಹೋಮ ಹವನಾದಿಗಳು ನಡೆಯಲಿವೆ.

14ರಂದು ಅಗ್ನಿಕುಂಡ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಕೂಲಿಪುರದ ಭೈರವೇಶ್ವರ ನಾಟಕ ಮಂಡಳಿಯಿಂದ ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ, 15ರಂದು ಹರಿಸೇವೆ, ಅನ್ನ ಸಂತರ್ಪಣೆ, ಸೋಮವಾರ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅರ್ಚಕ ವೆಂಕಟೇಶ ಸ್ವಾಮಿ ಮತ್ತು ಟ್ರಸ್ಟ್‌ನ ಅಧ್ಯಕ್ಷ ದೊಡ್ಡೇಗೌಡ ಮನವಿ ಮಾಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.