ADVERTISEMENT

ಚಾಲಕನ ಕಾಲ ಮೇಲೆ ಹರಿದ ಬಿಎಂಟಿಸಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2014, 20:28 IST
Last Updated 28 ಮಾರ್ಚ್ 2014, 20:28 IST
ಶಾಂತಿನಗರ ಡಿಪೊದಲ್ಲಿ ಶುಕ್ರವಾರ ಬೆಳಿಗ್ಗೆ ಬಿಎಂಟಿಸಿ ಬಸ್‌ ಹರಿದು ಗಾಯ­ಗೊಂಡ ಚಾಲಕ ಹಾಗೂ ನಿರ್ವಾಹಕರಾದ ಸಲೀಂ ಅವರು ಹಾಸ್ಮ್ಯಾಟ್ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 	– ಪ್ರಜಾವಾಣಿ ಚಿತ್ರ
ಶಾಂತಿನಗರ ಡಿಪೊದಲ್ಲಿ ಶುಕ್ರವಾರ ಬೆಳಿಗ್ಗೆ ಬಿಎಂಟಿಸಿ ಬಸ್‌ ಹರಿದು ಗಾಯ­ಗೊಂಡ ಚಾಲಕ ಹಾಗೂ ನಿರ್ವಾಹಕರಾದ ಸಲೀಂ ಅವರು ಹಾಸ್ಮ್ಯಾಟ್ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಾಂತಿನಗರ ಡಿಪೊದಲ್ಲಿ ಶುಕ್ರವಾರ ಬೆಳಿಗ್ಗೆ ಚಾಲಕ ಮತ್ತು ನಿರ್ವಾಹಕರಾದ ಸಲೀಂ (26) ಎಂಬ ಕಾಲ ಮೇಲೆ ಬಿಎಂಟಿಸಿ ಬಸ್‌ ಹರಿದಿದೆ. ತೀವ್ರ ಗಾಯಗೊಂಡಿರುವ ಅವರು ಹಾಸ್ಮ್ಯಾಟ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀದರ್‌ನಿಂದ ಬೆಳಿಗ್ಗೆ ನಗರಕ್ಕೆ ಬಂದ ಸಲೀಂ, ಡಿಪೊದ ನೀರಿನ ತೊಟ್ಟಿ ಬಳಿ ಮುಖ ತೊಳೆಯುತ್ತಿದ್ದರು. ಈ ವೇಳೆ ಎಲೆಕ್ಟ್ರಾನಿಕ್‌ ಸಿಟಿಗೆ ಹೊರಟಿದ್ದ ಬಸ್‌, ಚಾಲಕನ ನಿಯಂತ್ರಣ ಕಳೆದುಕೊಂಡು ಅವರಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಕೆಳಗೆ ಬಿದ್ದ ಅವರ ಕಾಲ ಮೇಲೆ ಬಸ್‌ನ ಚಕ್ರ ಹರಿದಿದೆ.

ಕೂಡಲೇ ಡಿಪೊದ ಇತರೆ ಸಿಬ್ಬಂದಿ ಸಲೀಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ಸಲೀಂ ಅವರ ಎಡಗಾಲಿನ ತೊಡೆ ಭಾಗದ ಮೂಳೆ ಪುಡಿ­ಪುಡಿಯಾಗಿದೆ. ಮಂಡಿಯ ಕೀಲು ಸಹ ತುಂಡಾಗಿದೆ. ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡ­­ಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ಅಗ­ತ್ಯತೆ ಬಗ್ಗೆ ಶನಿವಾರ ನಿರ್ಧರಿಸಲಾ­ಗು­ವುದು’ ಎಂದು ಹಾಸ್ಮ್ಯಾಟ್‌ ಆಸ್ಪತ್ರೆ ವೈದ್ಯ ಅಜಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತ್ನಿ ಹಾಗೂ ಐದು ತಿಂಗಳ ಮಗುವನ್ನು ನೋಡಲು ಬೀದರ್‌ಗೆ ಹೋಗಿದ್ದೆ. ಬೆಳಿಗ್ಗೆ 7.30ಕ್ಕೆ  ವಾಪಸಾದ ನಾನು, ಕರ್ತವ್ಯಕ್ಕೆ ಹಾಜರಾಗಲು ಅಣಿಯಾಗುತ್ತಿದ್ದೆ. ಈ ವೇಳೆ ಬಸ್‌ ಏಕಾಏಕಿ ಮೈಮೇಲೆ ಎರಗಿತು.

ಚಾಲಕ ಡಿಪೊದಲ್ಲೇ ಇಷ್ಟು ಅಜಾಗರೂಕತೆ ತೋರಿದರೆ ರಸ್ತೆಗಳಲ್ಲಿ ಯಾವ ರೀತಿ ಕೆಲಸ ಮಾಡಬಹುದು’ ಎಂದು ಸಲೀಂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಮಾನತಿನಲ್ಲಿದ್ದ ಸಲೀಂ
ಸಲೀಂ ಅವರು ಇತ್ತೀಚೆಗೆ ಪ್ರಯಾ­­ಣಿ­ಕರಿಂದ ಪ್ರಯಾಣ ದರ ಪಡೆದು­­ಕೊಂಡು ಟಿಕೆಟ್ ನೀಡಿರ­ಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಅಧಿಕಾರಿ­ಗಳು ಅವರನ್ನು ಅಮಾ­ನತಿ­ನಲ್ಲಿ ಇರಿಸಿದ್ದರು. ಇದೇ ವಿಷಯ­ವಾಗಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾ­ಡಲು ಸಲೀಂ ಡಿಪೊಗೆ ಬಂದಿದ್ದರು

ಷಡಾಕ್ಷರಯ್ಯ,
ಶಾಂತಿನಗರ ಡಿಪೊ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT