ADVERTISEMENT

ಛಾಯಾಗ್ರಹಣ ಅಪರೂಪದ ಕಲೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 18:30 IST
Last Updated 20 ಆಗಸ್ಟ್ 2012, 18:30 IST
ಛಾಯಾಗ್ರಹಣ ಅಪರೂಪದ ಕಲೆ
ಛಾಯಾಗ್ರಹಣ ಅಪರೂಪದ ಕಲೆ   

ಬೆಂಗಳೂರು: `ಕಣ್ಣಿಂದ ನೋಡಲು ಸಾಧ್ಯವಾಗುವ ಎಲ್ಲವನ್ನೂ ಹಿಡಿದಿಡುವ ಅಪರೂಪದ ಕಲೆ ಛಾಯಾಗ್ರಹಣ~ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಬೆಂಗಳೂರು ಜಿಲ್ಲಾ ಫೋಟೋ ಸ್ಟುಡಿಯೊ ಮಾಲೀಕರ ಸಂಘದ ವತಿಯಿಂದ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ನಡೆದ ವಿಶ್ವ ಛಾಯಾಗ್ರಾಹಕರ ದಿನ ಹಾಗೂ ಸಂಘದ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೇಯರ್ ಡಿ.ವೆಂಕಟೇಶಮೂರ್ತಿ ಮಾತನಾಡಿ, `ಸಂಘವು ಮಾಡುತ್ತಿರುವ ಕಾರ್ಯಕ್ಕೆ ಪಾಲಿಕೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು~ ಎಂದು ಭರವಸೆ ನೀಡಿದರು.

ಛಾಯಾಗ್ರಾಹಕರಾದ ಸೀತಾರಾಮ ರೈ, ಕೆ.ಶಂಕರ ನಾರಾಯಣ, ಆನಂದ್, ಮುಕುಂದ್ ಮತ್ತು ಜೈರಾಮ್ ಅವರಿಗೆ `ಸ್ಟುಡಿಯೊ ರತ್ನ~ ಪ್ರಶಸ್ತಿ ನೀಡಲಾಯಿತು. ಹಿರಿಯ ಚಲನಚಿತ್ರ ಛಾಯಾಗ್ರಾಹಕ ವಿ.ಕೆ.ಮೂರ್ತಿ ಹಾಗೂ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ಛಾಯಾಗ್ರಾಹಕರ ದಿನದ ಅಂಗವಾಗಿ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಉಪ ಮುಖ್ಯಮಂತ್ರಿ ಆರ್.ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.