ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ಕುಲಸಚಿವರನ್ನಾಗಿ ವಿ.ವಿ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ.ರಾಜೇಗೌಡ ಅವರನ್ನು ನೇಮಕ ಮಾಡಲಾಗಿದೆ.
ಇದುವರೆಗೆ ಕುಲಸಚಿವರಾಗಿದ್ದ ಡಾ.ಎಚ್.ವಿ.ನಂಜಪ್ಪ ಅವರು ನಿವೃತ್ತರಾಗಿದ್ದರಿಂದ ಈ ನೇಮಕ ಮಾಡಲಾಗಿದೆ. ಪೂರ್ಣಾವಧಿಗೆ ಕುಲಸಚಿವರು ನೇಮಕ ಆಗುವವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಕೃಷಿ ಹವಾಮಾನ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆ ನಡೆಸಿದ ಅನುಭವ ಅವರದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.