ದಾಬಸ್ಪೇಟೆ: ಸೋಂಪುರ ಹೋಬಳಿಯ ಶಿರಗನಹಳ್ಳಿ ಬಸವಣ್ಣ ದೇವಾಲಯದಲ್ಲಿ ಬಸವಣ್ಣ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಪೂಜೆ ಸಲ್ಲಿಸಿದರು. ಪಾನಕ, ಮಜ್ಜಿಗೆ ಜೊತೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿಡವಂದ ಗ್ರಾಮದಲ್ಲಿರುವ ಮಠದ ಬಸವಣ್ಣ ದೇವಾಲಯದಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬಸವಪಟ್ಟಣ ದಲ್ಲಿರುವ ಭೋಗ ಬಸವಣ್ಣ ದೇವಾ ಲಯದಲ್ಲಿ ಬೆಳಿಗ್ಗೆಯಿಂದ ಅಭಿಷೇಕ ಅರ್ಚನೆಯೊಂದಿಗೆ ಪೂಜೆ ನೆರವೇರಿತು.
ದಾಬಸ್ ಪೇಟೆ ಶಿವಗಂಗೆಗಳಲ್ಲಿ ಭಕ್ತರು ಅರವಟ್ಟಿಗೆ ತೆರೆದು ದಾರಿ ಹೋಕರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.