ADVERTISEMENT

ನಗರಕ್ಕೆ ಇಂದು ಉಪರಾಷ್ಟ್ರಪತಿ ವಾಹನ ನಿಲುಗಡೆ ನಿಷೇಧ

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:36 IST
Last Updated 11 ಜೂನ್ 2017, 19:36 IST
ನಗರಕ್ಕೆ ಇಂದು ಉಪರಾಷ್ಟ್ರಪತಿ ವಾಹನ ನಿಲುಗಡೆ ನಿಷೇಧ
ನಗರಕ್ಕೆ ಇಂದು ಉಪರಾಷ್ಟ್ರಪತಿ ವಾಹನ ನಿಲುಗಡೆ ನಿಷೇಧ   

ಬೆಂಗಳೂರು: ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಗರದಲ್ಲಿ ಸೋಮವಾರ  ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಯನ್ನು ಬೆಳಿಗ್ಗೆ 6ರಿಂದ ಸಂಜೆ 5ರ ವರೆಗೆ ನಿಷೇಧಿಸಲಾಗಿದೆ.

ಉಪರಾಷ್ಟ್ರಪತಿ ಸಂಚರಿಸುವ ವೇಳೆ ಸಾರ್ವಜನಿಕರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು: ಹಳೇ ವಿಮಾನ ನಿಲ್ದಾಣ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ ರಸ್ತೆ,  ಡಿಕನ್ಸನ್ ರಸ್ತೆ, ಕಬ್ಬನ್ ರಸ್ತೆ,  ರಾಜಭವನ ರಸ್ತೆ, ಅರಮನೆ ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ, ಮಿಲ್ಲರ್ಸ್ ರಸ್ತೆ, ಚಂದ್ರಿಕಾ ಜಂಕ್ಷನ್,  ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ,  ಟಿ.ಚೌಡಯ್ಯ ರಸ್ತೆ,   ಕುಮಾರಕೃಪಾ ರಸ್ತೆ, ಬಳ್ಳಾರಿ ರಸ್ತೆ.

ADVERTISEMENT

ವಾಹನ ನಿಲುಗಡೆಗೆ ಪರ್ಯಾಯ ಸ್ಥಳಗಳು: ಎಂ.ವಿ.ಜಯರಾಮ್ ರಸ್ತೆ, ತಿಮ್ಮಯ್ಯ ರಸ್ತೆ, ಟ್ಯಾಂಕ್ ಬಂಡ್ ರಸ್ತೆ,  ಜಸ್ಮಾ ದೇವಿ ಭವನ ರಸ್ತೆ, ಮಹಾವೀರ್ ಜೈನ್ ದೇವಸ್ಥಾನ ರಸ್ತೆ,  ಅರಮನೆ ಮೈದಾನದ ಮಾವಿನ ಕಾಯಿ ಮಂಡಿ ಆವರಣ. ಸೆಂಟ್ರಲ್ ಕಾಲೇಜು ಮೈದಾನ,  ವೈ.ರಾಮಚಂದ್ರ ರಸ್ತೆ, ಸ್ವಾತಂತ್ರ್ಯ ಉದ್ಯಾನ, ಬೆಂಗಳೂರು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರ, ಶೇಷಾದ್ರಿ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.