ADVERTISEMENT

ನಗರದಲ್ಲಿ ಇಂದು: ಗುರುವಾರ ಅ.20

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬೆಂಗಳೂರು ಮೆಟ್ರೊ ರೈಲು ನಿಗಮ: ಮಾಣೆಕ್‌ಷಾ ಪರೇಡ್ ಮೈದಾನ. `ನಮ್ಮ ಮೆಟ್ರೊ~ ರೈಲಿನ ಮೊದಲ ಹಂತದ ಸಂಚಾರದ ಉದ್ಘಾಟನೆ. ಉದ್ಘಾಟನೆ- ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್. ಉಪಸ್ಥಿತಿ-ರೈಲ್ವೆ ಸಚಿವ ದಿನೇಶ್ ತ್ರಿವೇದಿ. ಅಧ್ಯಕ್ಷತೆ-ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಮುಖ್ಯ ಅತಿಥಿಗಳು-ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ, ಎಂ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಸಭೆ ಸದಸ್ಯ ಅರುಣ್ ಜೇಟ್ಲಿ, ಮಾಜಿ ಮುಖ್ಯಮಂತ್ರಿಗಳಾದ ಎನ್.ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ಎಸ್.ಸುರೇಶ್‌ಕುಮಾರ್, ಆರ್.ಅಶೋಕ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸಂಸದರಾದ ಪಿ.ಸಿ.ಮೋಹನ್, ಅನಂತಕುಮಾರ್, ಮೇಯರ್ ಪಿ.ಶಾರದಮ್ಮ, ಜಪಾನ್‌ನ ರಾಯಭಾರಿ ಅಕಿತಾಕ ಸೈಕಿ, ಶಾಸಕರಾದ ಆರ್.ರೋಷನ್‌ಬೇಗ್, ಎನ್.ಎ.ಹ್ಯಾರಿಸ್, ಎಸ್.ರಘು, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್. ಬೆಳಿಗ್ಗೆ 10.30.

ಗೌತಮ್ ವೈದ್ಯಕೀಯ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ: 5ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಮಂಜುನಾಥನಗರ ಮೊದಲನೇ ಹಂತ, ರಾಜಾಜಿನಗರ. ಸಂಸ್ಥೆಯ ಬೆಳ್ಳಿಹಬ್ಬ. ಉದ್ಘಾಟನೆ-ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಮುಖ್ಯ ಅತಿಥಿಗಳು-ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವ ಎಸ್.ಸುರೇಶ್‌ಕುಮಾರ್, ಶಾಸಕ ನೆ.ಲ.ನರೇಂದ್ರಬಾಬು, ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಕುಲಪತಿ ಡಾ.ಎಚ್.ಮಹೇಶಪ್ಪ, ಸಂಸ್ಥೆಯ ಅಧ್ಯಕ್ಷ ಡಾ.ಎ.ಟಿ.ಎಸ್.ಗಿರಿ. ಮಧ್ಯಾಹ್ನ 12.

ಎಂ.ಎಸ್.ರಾಮಯ್ಯ ತಾಂತ್ರಿಕ ಸಂಸ್ಥೆ: ಸಂಸ್ಥೆಯ ಆವರಣ, ಮತ್ತಿಕೆರೆ. ಪದವಿ ದಿನಾಚರಣೆ. ಮುಖ್ಯ ಅತಿಥಿಗಳು-ದೆಹಲಿ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಇ.ಶ್ರೀಧರನ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಮಹೇಶಪ್ಪ. ಬೆಳಿಗ್ಗೆ 11.15.

ಅರಣ್ಯ ಇಲಾಖೆ: ಅರಣ್ಯ ಭವನ, 18ನೇ ಅಡ್ಡರಸ್ತೆ ಮಲ್ಲೇಶ್ವರ. ಭಾರತೀಯ ಹಸಿರು ಮಿಷನ್ ಕುರಿತು ಕಾರ್ಯಾಗಾರ. ಉದ್ಘಾಟನೆ-ಸಚಿವ ಸಿ.ಪಿ.ಯೋಗೀಶ್ವರ್. ಬೆಳಿಗ್ಗೆ 10.30.

ಟುವರೇನ್‌ಲ್ಯಾಂಡ್: ಎಲೆಕ್ಟ್ರಾನಿಕ್ ಸಿಟಿ, ಪೂರ್ವ, ಕೈಗಾರಿಕಾ ಪ್ರದೇಶ. ನೂತನ ಎಲೆಕ್ಟ್ರೊಮ್ಯಾಗ್ನೆಟಿಕ್ ತಪಾಸಣಾ ಪ್ರಯೋಗಾಲಯ ಉದ್ಘಾಟನೆ. ಉದ್ಘಾಟಕರು-ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಬೆಳಿಗ್ಗೆ 10.

ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ (ಸಿಪಿಸಿಬಿ): ಹೋಟೆಲ್ ಕ್ಯಾಪಿಟಲ್, ರಾಜಭವನ ರಸ್ತೆ. `ಸಿಮೆಂಟ್‌ನಲ್ಲಿ ತ್ಯಾಜ್ಯದ ಸಹ ಪ್ರಕ್ರಿಯೆ, ಕಲ್ಲಿದ್ದಲು, ಕಬ್ಬಿಣ ಕೈಗಾರಿಕೆ~ ಕುರಿತು ಕಾರ್ಯಾಗಾರ. ಉದ್ಘಾಟನೆ- ಮಂಡಳಿ ಅಧ್ಯಕ್ಷ ಪ್ರೊ.ಎಸ್.ಪಿ.ಗೌತಮ್. ಬೆಳಿಗ್ಗೆ 10.30.

ಜೈನ್ ಇನ್‌ಸ್ಟಿಟ್ಯೂಟ್ ಆಫ್ ವ್ಯಾಸ್ಕುಲರ್ ಸೈನ್ಸಸ್: ಎಪಿಐ ಭವನ. ಅಂಬೇಡ್ಕರ್ ಭವನದ ಬಳಿ ವಸಂತನಗರ, ನೂತನ ಮಧುಮೇಹ ಚಿಕಿತ್ಸಾ ಕೇಂದ್ರ ಉದ್ಘಾಟನೆ. ಮುಖ್ಯ ಅತಿಥಿ-ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಅತಿಥಿ-ಹಿರಿಯ ಐಎಎಸ್ ಅಧಿಕಾರಿ ಕೆ.ಎಚ್.ಗೋಪಾಲಕೃಷ್ಣ ಗೌಡ. ಬೆಳಿಗ್ಗೆ 11.45.

ಅಜೀಂ ಪ್ರೇಮ್‌ಜಿ ವಿ.ವಿ: ವಿವಿ ಆವರಣ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ. ಅನುಪಮಾ ರಾವ್ ಅವರಿಂದ `ಅಂಬೇಡ್ಕರ್: ಇನ್ ಹಿಸ್ ಟೈಮ್ ಅಂಡ್ ಅವರ್ಸ್~ ಕುರಿತು ಉಪನ್ಯಾಸ. ಮಧ್ಯಾಹ್ನ 3.

ನ್ಯಾಷನಲ್ ಅಸೋಸಿಯೇಷನ್ ಫಾರ್ ಬ್ಲೈಂಡ್: ಪುನರ್‌ವಸತಿ ಕೇಂದ್ರ, ಜೀವನ್‌ಬಿಮಾ ನಗರ. ಬಾಲ ಮೇಳ. ಅತಿಥಿ-ನೇರ ತೆರಿಗೆ ಪ್ರಾದೇಶಿಕ ತರಬೇತಿ ಕೇಂದ್ರದ ನಿರ್ದೇಶಕಿ ಜಹಾನ್‌ಜೇಬ್ ಅಖ್ತರ್. ಬೆಳಿಗ್ಗೆ 10.

ರೋಟರಿ ಕ್ಲಬ್ ಆಫ್ ಬೆಂಗಳೂರು ಕಂಟೋನ್ಮೆಂಟ್: ನಂ 11, ಪ್ರೋಮೊನೇಡ್ ರಸ್ತೆ, ರೋಟರಿ ಸಂಸ್ಥೆ, ಉನ್ನತಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ರಮೇಶ್ ಸ್ವಾಮಿ ಅವರಿಗೆ 2011ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ. ಸಂಜೆ 7.

ರಂಗಶ್ರೀ ಕಲಾ ಸಂಸ್ಥೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಂಗಗೌರವ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಟಿ.ಎಂ.ನಾಗರಾಜ್, ಕೆ.ಎಸ್.ಡಿ.ಎಲ್.ಚಂದ್ರು ಅವರಿಗೆ ಸನ್ಮಾನ. ಸಾನ್ನಿಧ್ಯ-ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ. ಪ್ರಶಸ್ತಿ ಪ್ರದಾನ-ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಉದ್ಘಾಟನೆ-ಮೈಸೂರ್ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್ ಪೂಜಾರಿ, ಗೌರವ ನುಡಿ-ಪತ್ರಕರ್ತ ರಾಜು ಮಳವಳ್ಳಿ, ಮುಖ್ಯ ಅತಿಥಿ-ಚಿತ್ರನಟ ಕರಿಬಸವಯ್ಯ, ರಂಗಶ್ರೀ ಕಲಾಸಂಸ್ಥೆ ಅಧ್ಯಕ್ಷ ಸಿ.ಬಿ.ಪ್ರೇಮನಾಥ್. ಸಂಜೆ 6.

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ: ಕನ್ನಡ ಭವನ, ಜೆ.ಸಿ.ರಸ್ತೆ. 23ನೇ ಪಂಚರಾತ್ರಿಗಳ ರಂಗೋತ್ಸವ. ಸಂಜೆ 5ಕ್ಕೆ `ಗುಬ್ಬಿಯ ಗೂಡಲ್ಲಿ~. ಹರಿಕಥೆ. ಸಂಜೆ 7.30.

ಕನ್ನಡ ಯುವಜನ ಸಂಘ: ಕನ್ನಡ ಯುವಜನ ಸಭಾಂಗಣ, ನಂ.1 ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. ಡಾ.ಕೆ.ಆರ್.ರಂಗನಾಥ್ ಕಂಟನಕುಂಟೆ ಅವರಿಂದ `ಬಹುಭಾಷೆಗಳು ಮತ್ತು ಮಾರುಕಟ್ಟೆಯ ಒಳಸಂಬಂಧ~ ಬಗ್ಗೆ ಉಪನ್ಯಾಸ. ಸಂಜೆ 6.

ಬೆಂಗಳೂರು ಗಾಯನ ಸಮಾಜ: ಕೆ.ಆರ್.ರಸ್ತೆ. 43ನೇ ಸಂಗೀತ ಸಮ್ಮೇಳನದಲ್ಲಿ ಬೆಳಿಗ್ಗೆ 10ಕ್ಕೆ ಆರ್.ಎ.ರಮಾಮಣಿ ಅವರಿಂದ `ಕಲ್ಪನಾ ಸ್ವರಗಳಲ್ಲಿ ರಾಗವೈಭವ~, ಡಾ.ಕೆ.ವರದರಂಗನ್ ಅವರಿಂದ `ಕರ್ನಾಟಕ ಶಾಸ್ತ್ರಿಯ ಸಂಗೀತ- ವೈಜ್ಞಾನಿಕ ವಿಶ್ಲೇಷಣೆ~ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ. ಸಂಜೆ 4.15ಕ್ಕೆ ಪಾವನಿ ಕಾಶಿನಾಥ್ ಗಾಯನ. ಪಕ್ಕವಾದ್ಯದಲ್ಲಿ: ವಿಠಲ್ ರಂಗನ್ (ವಯಲಿನ್), ಡಿ.ಆರ್.ಚೇತನಮೂರ್ತಿ (ಮೃದಂಗ). ಸಂಜೆ 6ಕ್ಕೆ ಸಂಜಯ ಸುಬ್ರಹ್ಮಣ್ಯ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ-ಎಂ.ಆರ್.ಗೋಪಿನಾಥ್ (ವಯಲಿನ್), ನೈವೇಲಿ ವೆಂಕಟೇಶ್(ಮೃದಂಗ), ತಿರುಚ್ಚಿ ಮುರಳಿ (ಘಟ).

ಗ್ಯಾಲರಿ ಸುಮುಖ: ನಂ.24/10, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡ್‌ನ್. ಶಿಶಿರ್ ಸಹಾನಾ ಅವರು ಗಾಜಿನಲ್ಲಿ ಮಾಡಿರುವ ಕಲಾಕೃತಿಗಳ ಪ್ರದರ್ಶನ. ಬೆಳಿಗ್ಗೆ 10.30.

ಪಿಇಎಸ್ ಪಾಲಿಟೆಕ್ನಿಕ್ ಕಾಲೇಜು: ಹನುಮಂತನಗರ. ನ್ಯಾಷನಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಗದೀಶ್ ಅವರಿಂದ ಅಲೆಗಳ ಧೃವೀಕರಣ ಕುರಿತು ಅತಿಥಿ ಉಪನ್ಯಾಸ. ಬೆಳಿಗ್ಗೆ 9.

ಇಂಡಿಯನ್ ಅಕಾಡೆಮಿ: ಹೆಣ್ಣೂರು ಮುಖ್ಯ ರಸ್ತೆ, ಕಲ್ಯಾಣನಗರ. ಮ್ಯಾನೇಜ್‌ಮೆಂಟ್ ಕೋರ್ಸ್‌ನ 8ನೇ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ. ಮುಖ್ಯ ಅತಿಥಿ-ಭಾರತ್ ಎಲೆಕ್ಟ್ರಾನಿಕ್ಸ್‌ನ ಮುಖ್ಯ ವಿಚಕ್ಷಣ ಅಧಿಕಾರಿ ಡಾ.ಕೃಷ್ಣಮೂರ್ತಿ. ಅಧ್ಯಕ್ಷತೆ-ಸಂಸ್ಥೆಯ ಅಧ್ಯಕ್ಷ ಡಾ.ಟಿ.ಸೋಮಶೇಖರ್. ಬೆಳಿಗ್ಗೆ 9.30.

ಧಾರ್ಮಿಕ ಕಾರ್ಯಕ್ರಮ

ದೇವಗಿರಿ ಶ್ರೀ ಗುರುಸೇವಾ ಸಮಿತಿ: ದೇವಗಿರಿ ರಾಯರಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಕುರಿತು ಉಪನ್ಯಾಸ. ಸಂಜೆ 6.30.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~. ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ
: ಪ್ರದೀಪ ಶರ್ಮಾ ಅವರಿಂದ ಸದ್ಗುರುಗಳ ಗ್ರಂಥದಿಂದ `ಸರ್ವಸಮ್ಮತೋಪದೇಶಗಳು~. ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಬೆಳಿಗ್ಗೆ 9.30.

ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 7.45.

ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ: ಗರುತ್ಮನ್ ಪಾರ್ಕ್, ಆರ್.ವಿ.ಟೀಚರ್ಸ್ ಕಾಲೇಜು ಹಿಂಭಾಗ. ಜಯನಗರ. ಕಲ್ಯಾಣಪುರಂ ಅರವಮುದನ್ ಸ್ವಾಮಿ ಅವರಿಂದ `ಸೀತಾ ಕಲ್ಯಾಣ~ ಉಪನ್ಯಾಸ. ಸಂಜೆ 6.

ರಂಗದರ್ಶಿ

ರಂಗಶಂಕರ: ಜೆ ಪಿ ನಗರ 2ನೇ ಹಂತ. ರಂಗಶಂಕರ ನಾಟಕೋತ್ಸವದಲ್ಲಿ ಆರೊನ್ ನ್ಯೂಮನ್ ನಿರ್ದೇಶನದ `ಈಸ್ ನಾಟ್ ದ ಪ್ರಾಬ್ಲಮ್~ ಇರಾನಿ ಚಲನಚಿತ್ರ (ಪ್ರವೇಶ ಉಚಿತ). ಸಂಜೆ 7.30.

ರಂಗದರ್ಶನ: ಸೇವಾ ಸದನ, 14ನೇ ಅಡ್ಡ ರಸ್ತೆ. ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಎದುರು, ಮಲ್ಲೇಶ್ವರ. `ನಮ್ಮ ನಿಮ್ಮಳಗೊಬ್ಬ~ (ರಚನೆ: ರಾಜೇಂದ್ರ ಕಾರಂತ್. ನಿರ್ದೇಶನ: ಮೈಕೋ ಶಿವಶಂಕರ್) ನಾಟಕ ಪ್ರದರ್ಶನ ಮತ್ತು ಹಿರಿಯ ರಂಗಭೂಮಿ ಕಲಾವಿದ ವಿ.ಶಂಕರ್, ಚಲನಚಿತ್ರ ಕಲಾವಿದ ಗಣೇಶ ರಾವ್ ಅವರಿಗೆ ಸನ್ಮಾನ. ಉದ್ಘಾಟನೆ: ಡಾ.ಸಿ.ಎನ್.ಅಶ್ವತ್ಥ ನಾರಾಯಣ. ಅಧ್ಯಕ್ಷತೆ-ಬಿ.ಟಿ.ಮುನಿರಾಜಯ್ಯ. ಅತಿಥಿ: ಮುನಿಸ್ವಾಮಿ ಗೌಡ. ಸಂಜೆ 6.30.

ಅಖಂಡ ಯಕ್ಷಗಾನ: ವಾದಿರಾಜ ಕಲ್ಯಾಣ ಮಂಟಪ, ನೆಟ್ಟಕಲ್ಲಪ್ಪ ವೃತ್ತ. ಹಾಸ್ಯ ಕಲಾವಿದ ಜಯಕುಮಾರ್ ಜೈನ್ ಕಾರ್ಗಲ್ ಇವರ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ. `ಚಂದ್ರಹಾಸ-ಕಾಳಿದಾಸ~  ಪೌರಾಣಿಕ ನಾಟಕ. (ಕಲಾವಿದರು: ನಾರಾಯಣ ಶಬರಾಯ, ಗುಂಡ್ಮಿ ರಘುರಾಮ್, ನಾರಾಯಣ ಹೆಬ್ಬಾರ್, ರಾಜೇಶ್ ಆಚಾರ್, ಅಮೃತದೇವ, ಶ್ರೀನಿವಾಸ ಪ್ರಭು, ಜಯಕುಮಾರ್ ಜೈನ್ ಕಾರ್ಗಲ್, ಕೆರಾಡಿ ಕೃಷ್ಣ ಶೆಟ್ಟಿ, ಉದಯ ಕುಮಾರ್ ಜೈನ್ ಕಾರ್ಗಲ್, ರಾಜೀವ್ ಶೆಟ್ಟಿ ಹೊಸಂಗಡಿ, ರಾಧಾಕೃಷ್ಣ ಉರಾಳ, ಪ್ರಶಾಂತ ಹೆಗಡೆ, ನಾಗರಾಜ ಕಾರ್ಗಲ್, ನಾಗೇಂದ್ರ ಪಂಚಲಿಂಗ. ಮಧ್ಯಾಹ್ನ 3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.