ಮಾರ್ಚ್ 07, ಸೋಮವಾರ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು: ಯವನಿಕ, ನೃಪತುಂಗ ರಸ್ತೆ. ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ. ಉದ್ಘಾಟನೆ- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಯು.ಆರ್.ರಾವ್. ಅತಿಥಿಗಳು- ಸಚಿವ ಕೃಷ್ಣ ಜೆ.ಪಾಲೇಮಾರ್. ಬೆಳಿಗ್ಗೆ 10.30. ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ. ಅತಿಥಿಗಳು- ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನ ಆರಾಧ್ಯ. ಸಂಜೆ 4.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ: ಕೆ.ಜಿ.ರಸ್ತೆ. ‘ಭಾರತೀಯ ಮಾರುಕಟ್ಟೆಯಲ್ಲಿ ಯೂರೋಪಿಯನ್ನರ ಬಂಡವಾಳ ಹೂಡಿಕೆ’ ಕುರಿತು ಸಭೆ. ಅತಿಥಿ- ಇಟಲಿಯ ವಾಣಿಜ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮ್ಯಾಥಿಯೋ ಲೇಜಾರನಿ. ಸಂಜೆ 4.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್: ಆರ್.ವಿ.ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, 36ನೇ ಅಡ್ಡರಸ್ತೆ, 26ನೇ ಮುಖ್ಯರಸ್ತೆ, 4ನೇ ’ಟಿ’ ಬ್ಲಾಕ್, ಜಯನಗರ. ಸಿಂಚನ ಕನ್ನಡ ವೇದಿಕೆಯ ಪ್ರಕಟಣೆಗಳ ಬಿಡುಗಡೆ ಸಮಾರಂಭ. ಅತಿಥಿಗಳು- ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ಅಧ್ಯಕ್ಷತೆ- ಟ್ರಸ್ಟ್ನ ಆಡಳಿತ ಮಂಡಳಿ ಸದಸ್ಯ ಡಾ.ಎಂ.ಎಸ್.ಪ್ರಕಾಶ್. ಸಂಜೆ 5.
ಕರ್ನಾಟಕ ನಾಟಕ ಅಕಾಡೆಮಿ: ಮಹಾರಾಣಿ ಲಕ್ಷ್ಮಿಅಮ್ಮಣ್ಣಿ ಕಾಲೇಜು, ಮಲ್ಲೇಶ್ವರ. ಮಹಿಳಾ ದಿನಾಚರಣೆಯ ಪ್ರಯುಕ್ತ ‘ಶಾಕುಂತಲೆಯೊಂದಿಗೆ ಒಂದು ಅಪರಾಹ್ನ’ ಮಹಿಳಾ ಏಕವ್ಯಕ್ತಿ ನಾಟಕ ಪ್ರದರ್ಶನ. ಮಧ್ಯಾಹ್ನ 3.
ರಿಲಯನ್ಸ್ ಟೈಂಔಟ್: ಕನ್ನಿಂಗ್ಹ್ಯಾಮ್ ರಸ್ತೆ. ಎಂ.ಎಚ್.ಅರ್ಶದ್ ಹುಸೈನ್ ಅವರ ‘ವಿಸ್ಮಯ ಪ್ಲಸ್’ ಪುಸ್ತಕ ಬಿಡುಗಡೆ. ಅತಿಥಿಗಳು- ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸುಧಾ’ ವಾರಪತ್ರಿಕೆ ಸಹಾಯಕ ಸಂಪಾದಕ ಬಿ.ಎಂ.ಹನೀಫ್, ಲೇಖಕ ಡಾ.ನಾ.ಸೋಮೇಶ್ವರ. ಸಂಜೆ 6.
ಬಸವ ಕೇಂದ್ರ: ಜೈನ್ ಶ್ವೇತಾಂಬರ್ ತೇರಾಪಂಥ್ ಸಭಾ, 2ನೇ ಮುಖ್ಯರಸ್ತೆ, ಗಾಂಧಿನಗರ. ಶರಣಸಂಗಮ ಕಾರ್ಯಕ್ರಮ. ಸಾನಿಧ್ಯ-ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು. ಅತಿಥಿಗಳು- ಸಚಿವ ಮುರುಗೇಶ್ ನಿರಾಣಿ, ವಾಣಿಜ್ಯ ತೆರಿಗೆ ಉಪ ಆಯುಕ್ತ ಕೆ.ಎಸ್.ಬಸವರಾಜ್. ಸಂಜೆ 6.
ಕನ್ನಡ ಯುವಜನ ಸಂಘ: ನಂ.1, ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡನಗರ. ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತು ಉಪನ್ಯಾಸ- ಜಾನಪದ ತಜ್ಞ ಡಾ.ತಲವಾಡಿ. ಅತಿಥಿ- ಪ್ರೊ.ಲಯನ್ ಸದಾಶಿವ. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ. ಸಂಜೆ 6.30.
ಕನ್ನಡ ಶ್ರೀ ಸಾಮಾನ್ಯರ ಕೂಟ: ಭಾರತೀಯ ವಿದ್ಯಾಭವನ, ಇಎಸ್ವಿ ಸಭಾಂಗಣ, ರೇಸ್ಕೋರ್ಸ್ ರಸ್ತೆ. ‘ಒಲವೇ ಮಂದಾರ’ ಚಿತ್ರ ಮಂಥನ. ಅತಿಥಿಗಳು- ನಟಿ ತಾರಾ, ಚಿತ್ರನಿರ್ದೇಶಕ ನಂಜುಂಡೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು. ಅಧ್ಯಕ್ಷತೆ- ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ. ಸಂಜೆ 5.
ಬಾಷ್ ಲಲಿತಕಲಾ ಸಂಘ: ಬಾಷ್ ಕ್ರೀಡಾಂಗಣ, ಆಡುಗೋಡಿ. ಕಲಾ ಸಂಗಮ. ಅತಿಥಿ- ಬಾಷ್ ಲಿಮಿಟೆಡ್ನ ತಾಂತ್ರಿಕ ಕಾರ್ಯಗಳ ಪ್ರಧಾನ ವ್ಯವಸ್ಥಾಪಕ ಪ್ರತಾಪ್ ಸರಗೋಡ್. ಸನ್ಮಾನಿತರು- ರಂಗಭೂಮಿ ಕಲಾವಿದ ಎಂ.ಎಸ್.ಉಮೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ. ಸಂಜೆ 6.15.
ಧಾರ್ಮಿಕ ಕಾರ್ಯಕ್ರಮ
ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್ಎಸ್ಎಂಆರ್ವಿ ಕಾಲೇಜು, ಜಯನಗರ ‘ಟಿ’ ಬ್ಲಾಕ್. ಸೌಂದರ್ಯ ಲಹರಿ ಕುರಿತು ಉಪನ್ಯಾಸ- ಡಾ.ಮೀನಾಕ್ಷಿ ರವಿ. ಸಂಜೆ 6.30.
ಕಾಳಿಯಮ್ಮನ ದೇವಾಲಯ: ಹಲಸೂರು ಮಾರುಕಟ್ಟೆ ಸಮೀಪ. ಕರುಮಾರಿಯಮ್ಮನ ಅಲಂಕಾರ ಮತ್ತು ಭಕ್ತಿಗೀತೆ ಗಾಯನ- ತರಂಗಿಣಿ ಪಿ.ಸಭಾಪತಿ. ಸಂಜೆ 5.
ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ: ಮಲ್ಲೇಶ್ವರ. ತಿರುವೀದಿ ಉತ್ಸವ. ಬೆಳಿಗ್ಗೆ 9.
ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್: ಸುಭೇದಾರ್ಛತ್ರ ರಸ್ತೆ, ಗಾಂಧಿನಗರ. ಸಂತ ನಿಳೋಬ ಮಹಾರಾಜರ ಸಪ್ತಾಹ ಮಹೋತ್ಸವ ಪ್ರಯುಕ್ತ ಪಂಡರಿ ಭಜನೆ- ಬೆಳಿಗ್ಗೆ 9.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.