ADVERTISEMENT

ಮಕ್ಕಳು ಏನು ಮಾಡಿದರೂ ಚೆಂದ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST
ಮಕ್ಕಳು ಏನು ಮಾಡಿದರೂ ಚೆಂದ
ಮಕ್ಕಳು ಏನು ಮಾಡಿದರೂ ಚೆಂದ   

ಬೆಂಗಳೂರು: `ಮಕ್ಕಳ ಬೇಸಿಗೆ ಶಿಬಿರವು ಉತ್ತಮವಾಗಿ ನಡೆಯುತ್ತಿದೆ. ಈ ಬಾರಿಯ ಬೇಸಿಗೆ ಶಿಬಿರದ ವಸ್ತು ವಿಷಯ `ಕರ್ನಾಟಕ~. ಕರ್ನಾಟಕದ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಕುರಿತಾಗಿದೆ~ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಸುಲೋಚನ ಜಿ.ಕೆ. ಭಟ್ ಹೇಳಿದರು.

ಕಬ್ಬನ್ ಉದ್ಯಾನವನದ ಬಾಲಭವನದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರವನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, `ಮಕ್ಕಳ ಪ್ರತಿಭೆಗೆ ಬೆಂಬಲ ನೀಡಿ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತಾಹಿಸುವುದೇ ಬೇಸಿಗೆ ಶಿಬಿರದ ಉದ್ದೇಶವಾಗಿದೆ~ ಎಂದರು.

`ಇಲ್ಲಿ ಮಕ್ಕಳ ಪ್ರತಿಭೆಯನ್ನು ಕಂಡು ಮನಸ್ಸಿಗೆ ಆನಂದವಾಗಿದೆ.  ಇಲ್ಲಿ ಮಕ್ಕಳ ಕನಸಿಗೆ ರೆಕ್ಕೆ ಮೂಡಿವೆ. ಅವರು ಪಠ್ಯವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಮುಗ್ಧ ಮನಸ್ಸಿನಿಂದ ಏನೆಲ್ಲ ಮಾಡಿದರೂ ಚೆನ್ನಾಗಿರುತ್ತದೆ~ ಎಂದು ಹೇಳಿದರು.

ADVERTISEMENT

`ಬೇಸಿಗೆ ಶಿಬಿರವು ಏ.12 ರಿಂದ ಮೇ 20 ರವರೆಗೆ ನಡೆಯಲಿದೆ. ಆಸಕ್ತರು ಸಂಪರ್ಕಿಸಬಹುದು~ ಎಂದು ಹೇಳಿದರು. ಶಾಸಕ ಕರಡಿ ಸಂಗಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.