ಹುಣಸೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಗಾವಡಗೆರೆಯಲ್ಲಿ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರೇಮಿಗಳು ಸೋಮವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಆರ್.ನಗರ ಕುವೆಂಪು ಬಡಾವಣೆ ನಿವಾಸಿ ಜಮುನಾ (28) ಮತ್ತು ಹುಣಸೂರು ತಾಲ್ಲೂಕು ತೊಂಡಾಳು ಗ್ರಾಮದ ದಿಲೀಪ್ (22) ಆತ್ಮಹತ್ಯೆ ಮಾಡಿಕೊಂಡವರು. ನರ್ಸಿಂಗ್ ಕೋರ್ಸ್ ಮುಗಿಸಿದ್ದ ಜಮುನಾ, ಪದವೀಧರನಾದ ದಿಲೀಪ್ ಇವರಿಬ್ಬರೂ ದೂರದ ಸಂಬಂಧಿಕರು.
ವಿವಾಹವಾಗಲು ಪೋಷಕರ ಮನವೊಲಿಸುವ ಯತ್ನಿಸಿದ್ದರು. ಆದರೆ, ಪೋಷಕರು ವಯಸ್ಸಿನ ಅಂತರ ನೆಪವೊಡ್ಡಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.