ADVERTISEMENT

ಮಿಂಚುಳ್ಳಿಯಬಂಗಾರ ಬೇಟೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2011, 19:30 IST
Last Updated 9 ನವೆಂಬರ್ 2011, 19:30 IST
ಮಿಂಚುಳ್ಳಿಯಬಂಗಾರ ಬೇಟೆ
ಮಿಂಚುಳ್ಳಿಯಬಂಗಾರ ಬೇಟೆ   

ಬೆಂಗಳೂರು: `ಇಂಡಿಯಾ ಇಂಟರ್‌ನ್ಯಾಷನಲ್ ಫೊಟೋಗ್ರಾಫಿಕ್ ಕೌನ್ಸಿಲ್~ ವತಿಯಿಂದ ದೆಹಲಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಚಾಂಪಿಯನ್‌ಷಿಪ್‌ನಲ್ಲಿ `ಪ್ರಜಾವಾಣಿ~ಯ ಅರೆಕಾಲಿಕ ವರದಿಗಾರ ಹ.ಸ.ಬ್ಯಾಕೋಡ ಅವರಿಗೆ ನಾಲ್ಕು ಬಂಗಾರದ ಪದಕಗಳು ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳು ಬಂದಿವೆ.

ಚಾಂಪಿಯನ್‌ಷಿಪ್‌ನಲ್ಲಿ ಬ್ಯಾಕೋಡ ಅವರ ಒಟ್ಟು 16 ವನ್ಯಜೀವಿ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿವೆ. ಅವುಗಳಲ್ಲಿ ಬಂಗಾರದ ಪದಕ ವಿಜೇತ ಮಿಂಚುಳ್ಳಿ (ಕಿಂಗ್‌ಫಿಷರ್), ಹಳದಿ ಟಿಟ್ಟಿಭ ಮೊದಲಾದ ಹಕ್ಕಿಗಳ ಚಿತ್ರಗಳು ಸೇರಿವೆ. ಊಸರವಳ್ಳಿ, ಕಳ್ಳಿಪೀರ್, ಹಾರ್ನ್‌ಬೀಲ್ ಪಕ್ಷಿಗಳ ಚಿತ್ರಗಳು ಅಂತರರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.