ADVERTISEMENT

‘ಯೋಗಕೇಂದ್ರ ಸ್ಥಾಪನೆ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:37 IST
Last Updated 18 ಜುಲೈ 2017, 19:37 IST
ಉದ್ಯಾನದಲ್ಲಿ ಗಿಡ ನೆಡಲಾಯಿತು. ಎಸ್‌.ಟಿ.ಸೋಮಶೇಖರ್‌, ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ಜಿ.ಮುನಿರಾಜು, ಡಾ.ಮಮತಾ, ಪ್ರಕೃತಿ ಪ್ರಸನ್ನ ಇದ್ದಾರೆ
ಉದ್ಯಾನದಲ್ಲಿ ಗಿಡ ನೆಡಲಾಯಿತು. ಎಸ್‌.ಟಿ.ಸೋಮಶೇಖರ್‌, ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ಜಿ.ಮುನಿರಾಜು, ಡಾ.ಮಮತಾ, ಪ್ರಕೃತಿ ಪ್ರಸನ್ನ ಇದ್ದಾರೆ   

ಬೆಂಗಳೂರು:  ಟೊಯೋಟ ಗ್ರೂಪ್‌ ಗಜಾನನ ಯುವಕರ ಸಂಘವು ಉಲ್ಲಾಳು ವಾರ್ಡ್‌ನ ಎಂ.ವಿಶ್ವೇಶ್ವರಯ್ಯ 1ನೇ ಬಡಾವಣೆಯ ಉದ್ಯಾನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ರಾಣಿ ಚೆನ್ನಮ್ಮ ಮಹಿಳಾ ಚಾರಿಟಬಲ್ ಟ್ರಸ್ಟ್ ಹಾಗೂ ಉತ್ತರ ಕರ್ನಾಟಕ ಗೆಳೆಯರ ಬಳಗ ಚಾರಿಟಬಲ್ ಟ್ರಸ್ಟ್‌ಗಳ ಪದಾಧಿಕಾರಿಗಳು ಈ ಕೆಲಸದಲ್ಲಿ ತೊಡಗಿಸಿಕೊಂಡರು. ಮಕ್ಕಳು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಉದ್ಯಾನದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

ADVERTISEMENT

‘ಉದ್ಯಾನದಲ್ಲಿ ಕೊಳವೆಬಾವಿ ವ್ಯವಸ್ಥೆ ಕಲ್ಪಿಸುವುದು, ಬಯಲು ಜಿಮ್ ಹಾಗೂ ಯೋಗಕೇಂದ್ರವನ್ನು ಸ್ಥಾಪಿಸಲಾಗುತ್ತದೆ’ ಎಂದು ಶಾಸಕ ಎಸ್.ಟಿ.ಸೋಮಶೇಖರ್‌ ಹೇಳಿದರು.

ಪರಿಸರವಾದಿ ಡಾ.ಮಮತಾ, ‘ಮಕ್ಕಳಿಗೆ ಬಾಲ್ಯದಲ್ಲೇ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಸಸಿಗಳನ್ನು ನೆಟ್ಟು ಪೋಷಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.