ಬೆಂಗಳೂರು: ತಮಿಳುನಾಡಿನ ಸೋಮನಾಯಕನ್ಪಟ್ಟಿ ಮತ್ತು ಪಟ್ಚೂರ್ ನಡುವೆ ಶುಕ್ರವಾರ ಕನ್ಯಾಕುಮಾರಿ– ಬೆಂಗಳೂರು ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ್ದರಿಂದಾಗಿ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಶನಿವಾರ (ಫೆ.6) ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಮೂರು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಬೆಂಗಳೂರು ಸಿಟಿ– ಚೆನ್ನೈ ಶತಾಬ್ದಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12028), ಜೋಳಾರ್ಪೆಟ್ಟೈ– ಬೆಂಗಳೂರು ಸಿಟಿ ಎಕ್ಸ್ಪ್ರೆಸ್ (16519) ಮತ್ತು ಶ್ರೀಸತ್ಯ ಸಾಯಿ ಪ್ರಶಾಂತಿ ನಿಲಯಮ್ ಚೆನ್ನೈ ಎಕ್ಸ್ಪ್ರೆಸ್ (12692) ರೈಲುಗಳ ಸಂಚಾರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.