ADVERTISEMENT

ಸಂಭ್ರಮದ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 20:19 IST
Last Updated 22 ಏಪ್ರಿಲ್ 2013, 20:19 IST
ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಈಚೆಗೆ ನಡೆದ ಭೈಲಾಂಜನೇಯ ಬ್ರಹ್ಮರಥೋತ್ಸವದಲ್ಲಿ ಭಾಗಿಯಾದ ಜನಸ್ತೋಮ
ನೆಲಮಂಗಲ ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಈಚೆಗೆ ನಡೆದ ಭೈಲಾಂಜನೇಯ ಬ್ರಹ್ಮರಥೋತ್ಸವದಲ್ಲಿ ಭಾಗಿಯಾದ ಜನಸ್ತೋಮ   

ನೆಲಮಂಗಲ:  ತಾಲ್ಲೂಕಿನ ಭೈರಶೆಟ್ಟಿಹಳ್ಳಿಯ ರೈಲ್ವೆ ಗೊಲ್ಲಹಳ್ಳಿಯ ಬೈಲಾಂಜನೇಯಸ್ವಾಮಿಯ ಬ್ರಹ್ಮರಥೊತ್ಸವ ಸಂಭ್ರಮದಿಂದ ಈಚೆಗೆ ನಡೆಯಿತು.

ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ ಸಾವಿರಾರು ಜನ ಪಾಲ್ಗೊಂಡಿದ್ದರು. ಸುತ್ತಮುತ್ತಲ ಊರುಗಳಿಂದ ಬಂದಿದ್ದ ಭಕ್ತರಿಗೆ ನೆರವಾಗಲು  ಕಿಲೋಮೀಟರ್‌ನಷ್ಟು ದೂರದ ಇಕ್ಕೆಲಗಳಲ್ಲಿ ಅರವಂಟಿಗೆಗಳನ್ನು ನಿರ್ಮಿಸಲಾಗಿತ್ತು. ಬಿಸಿಲಿನಿಂದ ದಣಿದವರಿಗೆ ಪ್ರಸಾದ ರೂಪದಲ್ಲಿ ನೀರು ಮಜ್ಜಿಗೆ, ಬೆಲ್ಲದ ಪಾನಕ, ಕೋಸಂಬರಿಗಳನ್ನು ವಿತರಿಸಿದರೆ ಕೆಲವರು ಅನ್ನದಾಸೋಹವನ್ನು ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.