ADVERTISEMENT

ಸಚಿವರಿಗೆ ಅಡ್ಡಿಯಾಗದ ನೀತಿ ಸಂಹಿತೆ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 20:11 IST
Last Updated 5 ಮಾರ್ಚ್ 2014, 20:11 IST

ಚನ್ನಪಟ್ಟಣ: ಲೋಕಸಭಾ ಚುನಾ­ವಣಾ ನೀತಿ ಸಂಹಿತೆ ಜಾರಿಯಾದ ನಂತರವೂ ಪಟ್ಟಣದ ಎಲೆಕೇರಿ ರೈಲ್ವೆ­ಗೇಟ್ ಅಂಡರ್‌ಪಾಸ್‌ ಕಾಮಗಾರಿ ಶಂಕುಸ್ಥಾಪನೆ ನಡೆಯಿತು.

ನೀತಿ ಸಂಹಿತೆ ಜಾರಿಯಾದ ಕಾರಣ ಶಂಕುಸ್ಥಾಪನೆ ನೆರವೇರಿ­ಸುವುದಿಲ್ಲ ಎಂದೇ ಮಾತು ಆರಂಭಿಸಿದ ಸಚಿವ ಡಿ.ಕೆ.­ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಭಾಷಣ ಮಾಡಿದರು.

ನನ್ನ 6 ತಿಂಗಳ ಅವಧಿಯಲ್ಲಿ  ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ­ನಿರ್ವಹಿಸಿದ್ದೇನೆ. ನೀವು ನನ್ನ ಕೆಲ­ಸವನ್ನು ಮೆಚ್ಚಿದ್ದರೆ ಮುಂಬರುವ ಚುನಾವಣೆಯಲ್ಲಿ ನನ್ನನ್ನು ಆಶೀ­ರ್ವದಿಸಿ’ ಎಂದು ಡಿ.ಕೆ.ಸುರೇಶ್ ಮನವಿ ಮಾಡಿದರು.

ಸರ್ಕಾರಿ ಕಾರ್ಯಕ್ರಮದ ವೇದಿಕೆ­ಯಲ್ಲೇ ಸಂಸದ ಸುರೇಶ್‌ ಅವರು ಚುನಾವಣಾ ಭಾಷಣ ಮಾಡಿ ಮತ ಯಾಚಿಸಿದ್ದು ವಿಶೇಷವಾಗಿತ್ತು. ರಾರಾಜಿಸಿದ ಬ್ಯಾನರ್‌ಗಳು: ಲೋಕ­ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗುತ್ತದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಇತ್ತಾ­ದರೂ, ಬೆಳಗ್ಗೆಯಿಂದಲೇ ಬೃಹತ್ ವೇದಿಕೆ ಸಿದ್ಧಪಡಿಸಿ, ಪಟ್ಟಣದ ತುಂಬೆಲ್ಲಾ ಬ್ಯಾನರ್, ಕಟೌಟ್‌ ಮತ್ತು ಕಾಂಗ್ರೆಸ್‌ ಪಕ್ಷದ ಬಾವುಟ­ಗಳನ್ನು ಹಾರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.