ADVERTISEMENT

ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಗೀತಾ ರಾಮಾನುಜಂಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:49 IST
Last Updated 1 ಜುಲೈ 2017, 19:49 IST
ಡಾ.ಗೀತಾ ರಾಮಾನುಜಂ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಯಿತು. ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಸದಸ್ಯ ರಾಜಣ್ಣ, ಕನ್ನಡ ಸಾಹಿತ್ಯ  ಪರಿಷತ್ತು ಯಶವಂತಪುರ ಕ್ಷೇತ್ರ ಘಟಕದ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್, ಪ್ರೊ.ರೋಹಿಣಿ, ಗೌರವ ಸಲಹೆಗಾರ ನ.ಶ್ರೀ.ಸುಧೀಂದ್ರರಾವ್, ಕಾರ್ಯದರ್ಶಿ ವೆಂಕಟೇಶ್, ಕೋಶಾಧ್ಯಕ್ಷ ಸುರೇಶ್, ಸಮ್ಮೇಳನದ ಸಂಚಾಲಕ   ಪ್ರೊ.ಜಯರಾಮ್ ಇದ್ದಾರೆ
ಡಾ.ಗೀತಾ ರಾಮಾನುಜಂ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಯಿತು. ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಸದಸ್ಯ ರಾಜಣ್ಣ, ಕನ್ನಡ ಸಾಹಿತ್ಯ ಪರಿಷತ್ತು ಯಶವಂತಪುರ ಕ್ಷೇತ್ರ ಘಟಕದ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್, ಪ್ರೊ.ರೋಹಿಣಿ, ಗೌರವ ಸಲಹೆಗಾರ ನ.ಶ್ರೀ.ಸುಧೀಂದ್ರರಾವ್, ಕಾರ್ಯದರ್ಶಿ ವೆಂಕಟೇಶ್, ಕೋಶಾಧ್ಯಕ್ಷ ಸುರೇಶ್, ಸಮ್ಮೇಳನದ ಸಂಚಾಲಕ ಪ್ರೊ.ಜಯರಾಮ್ ಇದ್ದಾರೆ   

ಬೆಂಗಳೂರು: ಯಶವಂತಪುರ ಕ್ಷೇತ್ರದ 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಗೀತಾ ರಾಮಾನುಜಂ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

ಸ್ವಾಗತ ಸಮಿತಿಯ ಅಧ್ಯಕ್ಷ  ಎಸ್.ಟಿ.ಸೋಮಶೇಖರ್ ಗೀತಾ ಅವರಿಗೆ ಆಹ್ವಾನ ಪತ್ರಿಕೆ ನೀಡಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ವಿನಂತಿಸಿದರು.

ಬಳಿಕ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸಮ್ಮೇಳನಾಧ್ಯಕ್ಷರಾಗಿ ಮಹಿಳೆಯನ್ನು ಆಯ್ಕೆ ಮಾಡಲಾಗಿದೆ. ಜುಲೈ 9
ರಂದು ಕೊಮ್ಮಘಟ್ಟ ರಸ್ತೆಯ ಶೇಷಾದ್ರಿಪುರ ಕಾಲೇಜಿನಲ್ಲಿ ಸಮ್ಮೇಳನ ನಡೆಯಲಿದೆ. ಎಲ್ಲರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.