ಬೆಂಗಳೂರು: ಸಾಲ ನೀಡಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಒಂದನೇ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.ನಾಗಶೆಟ್ಟಿಹಳ್ಳಿ ನಿವಾಸಿ ರಘು (38) ಶಿಕ್ಷೆಗೆ ಗುರಿಯಾದವನು. 2007ರ ಫೆ.20 ರಂದು ತನ್ನ ಸ್ನೇಹಿತ ಗಣೇಶ ಅವರ ಜತೆ ಹಣಕಾಸಿನ ವಿಚಾರವಾಗಿ ಜಗಳವಾಡಿದ್ದ ರಘು, ಅದೇ ದಿನ ರಾತ್ರಿ ಗಣೇಶ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಆತನ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದ ಪೊಲೀಸರು ತಿಳಿಸಿದ್ದಾರೆ.ರಘು ಕೊಲೆ ಮಾಡಿರುವ ವಿಷಯ ಗೊತ್ತಿದ್ದರೂ ಆತನಿಗೆ ಮಹೇಶ್ ಅಲಿಯಾಸ್ ಮೋನಿ ಆಶ್ರಯ ನೀಡಿದ್ದನು.
ಇಬ್ಬರೂ ಆರೋಪಿಗಳನ್ನು 2007ರ ಮಾ.27ರಂದು ವಿದ್ಯಾರಣ್ಯಪುರದಲ್ಲಿ ಬಂಧಿಸಿದ ಪೊಲೀಸರು, ಆರೋಪಿಗಳ ವಿರುದ್ಧ ಮೇ.17ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ತ್ವರಿತ ನ್ಯಾಯಾಲಯ ಮಹೇಶ್ರನ್ನು ನಿರಪರಾಧಿ ಎಂದು ಆದೇಶ ನೀಡಿ, ಆರೋಪಿ ರಘುವಿಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.