ADVERTISEMENT

ಹೊಸಕೋಟೆ: ಧರೆಗುರುಳಿದ ಮರ ಬಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:51 IST
Last Updated 2 ಏಪ್ರಿಲ್ 2013, 19:51 IST
ಹೊಸಕೋಟೆ ಕೋಟೆ ಬಡಾವಣೆಯಲ್ಲಿನ ಹಳೆಯ ಅಶ್ವತ್ಥ ಮರದ ಭಾಗವೊಂದು ಮಂಗಳವಾರ ಸಂಜೆ ನೆಲಕ್ಕುರಳಿ ಬಿದ್ದಿರುವುದನ್ನು ಸಾರ್ವಜನಿಕರು ವೀಕ್ಷಿಸಿದರು
ಹೊಸಕೋಟೆ ಕೋಟೆ ಬಡಾವಣೆಯಲ್ಲಿನ ಹಳೆಯ ಅಶ್ವತ್ಥ ಮರದ ಭಾಗವೊಂದು ಮಂಗಳವಾರ ಸಂಜೆ ನೆಲಕ್ಕುರಳಿ ಬಿದ್ದಿರುವುದನ್ನು ಸಾರ್ವಜನಿಕರು ವೀಕ್ಷಿಸಿದರು   

ಹೊಸಕೋಟೆ: ಪಟ್ಟಣದ ಕೋಟೆ ಬಡಾವಣೆಯಲ್ಲಿ ಮಂಗಳವಾರ ಸಂಜೆ ಭಾರಿ ಗಾತ್ರದ ಅಶ್ವತ್ಥ ಮರದ ಭಾಗವೊಂದು ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಮರದ ಕೆಳಗಡೆ ಇದ್ದ ಪೆಟ್ಟಿ ಅಂಗಡಿಯೊಂದು ಸಂಪೂರ್ಣ ಜಖಂಗೊಂಡಿತಲ್ಲದೆ ವೆಂಕೋಬರಾವ್ (15) ಎಂಬ ಬಾಲಕನೊಬ್ಬನ ಕಾಲು ಮೂಳೆ ಮುರಿದಿದೆ.

ಪೆಟ್ಟಿ ಅಂಗಡಿಯಲ್ಲಿದ್ದ ಮತ್ತೊಬ್ಬ ಬಾಲಕಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ಅಶ್ವತ್ಥಕಟ್ಟೆ ಕೆಳಗಿದ್ದ ಇನ್ನೊಂದು ಪೆಟ್ಟಿ ಅಂಗಡಿ ಹಾಗೂ ವಿದ್ಯುತ್ ಕಂಬಗಳು ಹಾನಿಯಾಗಿವೆ. ಮರಬಿದ್ದ ಜಾಗದಲ್ಲಿ ಬಸ್ ನಿಲುಗಡೆ ಜಾಗವೂ ಇದ್ದು ಸದಾ ಗಿಜಿಗುಡುತ್ತಿರುತ್ತದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಮರ ಬಹಳಷ್ಟು ಹಳೆಯದಾಗಿದ್ದು ಮಧ್ಯಭಾಗದಲ್ಲಿ ಟೊಳ್ಳಾಗಿದ್ದೆ ಮರ ಬೀಳಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.