ADVERTISEMENT

‘ಅನನ್ಯ ಶಾಖೆ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2016, 19:33 IST
Last Updated 12 ಆಗಸ್ಟ್ 2016, 19:33 IST
ಸಿಂಡಿಕೇಟ್‌ ಬ್ಯಾಂಕಿನ ಇಂದಿರಾನಗರ ಶಾಖೆಯಲ್ಲಿ  ಅರುಣ್‌ ಶ್ರೀವಾಸ್ತವ್‌ ಅವರು ‘ಅನನ್ಯ ಶಾಖೆ’ ಯೋಜನೆಯನ್ನು ಉದ್ಘಾಟಿಸಿದರು. ಪ್ರಧಾನ ವ್ಯವಸ್ಥಾಪಕ ಕೆ.ಟಿ.ರೈ ಉಪಸ್ಥಿತರಿದ್ದರು.
ಸಿಂಡಿಕೇಟ್‌ ಬ್ಯಾಂಕಿನ ಇಂದಿರಾನಗರ ಶಾಖೆಯಲ್ಲಿ ಅರುಣ್‌ ಶ್ರೀವಾಸ್ತವ್‌ ಅವರು ‘ಅನನ್ಯ ಶಾಖೆ’ ಯೋಜನೆಯನ್ನು ಉದ್ಘಾಟಿಸಿದರು. ಪ್ರಧಾನ ವ್ಯವಸ್ಥಾಪಕ ಕೆ.ಟಿ.ರೈ ಉಪಸ್ಥಿತರಿದ್ದರು.   

ಬೆಂಗಳೂರು:  ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಸಲುವಾಗಿ ಶಾಖೆಗಳನ್ನು ಆಧುನೀಕರಣಗೊಳಿಸುವ  ‘ಅನನ್ಯ ಶಾಖೆ’ ಯೋಜನೆಯನ್ನು ಸಿಂಡಿಕೇಟ್‌ ಬ್ಯಾಂಕ್‌ ಆರಂಭಿಸಿದೆ.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್‌ ಶ್ರೀವಾಸ್ತವ್‌ ಅವರು ಬ್ಯಾಂಕಿನ ಇಂದಿರಾನಗರ ಶಾಖೆಯಲ್ಲಿ ಗುರುವಾರ ಈ ಯೋಜನೆಗೆ ಚಾಲನೆ ನೀಡಿದರು.

‘ಶೂಲೆ, ವಿ.ವಿ.ಪುರ, ಶೇಷಾದ್ರಿಪುರ ಶಾಖೆಗಳನ್ನು ಅನನ್ಯ ಯೋಜನೆಯಡಿ ಆಧುನೀಕರಣಗೊಳಿಸಲಾಗಿದೆ. ಬ್ಯಾಂಕ್‌ ಇನ್ನು 6 ತಿಂಗಳುಗಳಲ್ಲಿ ಶೇಕಡಾ 10ರಷ್ಟು ಶಾಖೆಗಳನ್ನು ಈ ಯೋಜನೆ ಅಡಿ ಮೇಲ್ದರ್ಜೆಗೇರಿಸುವ ಉದ್ದೇಶವಿದೆ. ಡಿಜಿಟಲ್‌ ತಂತ್ರಜ್ಞಾನದ  ವಿವಿಧ ಸೌಲಭ್ಯಗಳನ್ನು ಹೊಂದಿರುವ ಈ ಶಾಖೆಗಳಲ್ಲಿ ತ್ವರಿತವಾಗಿ ಖಾತೆ ಆರಂಭಿಸುವ ಸೇವೆಯೂ  ಲಭ್ಯ’ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಅತುಲ್‌ ಕುಮಾರ್‌ ತಿಳಿಸಿದರು. ಪ್ರಧಾನ ವ್ಯವಸ್ಥಾಪಕ ಕೆ.ಟಿ.ರೈ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.