ADVERTISEMENT

‘ಮಧ್ಯರಾತ್ರಿ ವರೆಗೂ ಬಾರ್‌ಗೆ ಅವಕಾಶ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 20:18 IST
Last Updated 6 ಮಾರ್ಚ್ 2014, 20:18 IST

ನೆಲಮಂಗಲ: ‘ಮಧ್ಯರಾತ್ರಿವರೆಗೂ ಬಾರ್‌ ಮತ್ತು ರೆಸ್ಟೊರೆಂಟ್‌ಗಳನ್ನು ತೆರೆ­ಯಲು ಅವಕಾಶ ನೀಡಿರುವುದು ಸರಿ­ಯಲ್ಲ ಎಂದು ನಿವೃತ್ತ ಪೊಲೀಸ್‌ ಆಯುಕ್ತ ಜ್ಯೋತಿ ಪ್ರಕಾಶ್‌ ಮಿರ್ಜಿ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಹಂಚಿಪುರದಲ್ಲಿ ಚಾಮುಂಡೇಶ್ವರಿ ಸ್ಪೋರ್ಟ್ಸ್ ಕ್ಲಬ್‌ ಏರ್ಪಡಿ­ಸಿದ್ದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವಿಜೇತ­ರಾದವರಿಗೆ ₨25,555 ನಗದು ಮತ್ತು ಟ್ರೋಫಿ ವಿತರಿಸಿ  ಮಾತನಾಡಿದರು.

‘ತಡರಾತ್ರಿವರೆಗೆ ಬಾರ್‌ಗಳು ತೆರೆ­ಯು­ವುದರಿಂದ ಎಟಿಎಂ ಕಳ್ಳತನ, ಸರ­ಗಳವು ಸೇರಿದಂತೆ ಅಪರಾಧ ಪ್ರಕರಣ­ಗಳು ಹೆಚ್ಚುತ್ತವೆ. ಅವುಗಳನ್ನು ನಿಯಂತ್ರಿ­ಸಲು ಪೊಲೀಸರು ಮತ್ತು ಬಾರ್‌ ಕಾರ್ಮಿಕ­ರಿಗೆ ಕಷ್ಟ’ ಎಂದರು.

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಸಚ್ಚಿದಾನಂದಮೂರ್ತಿ ವಿವಿಧ ಬಹು­ಮಾನಗಳನ್ನು ವಿತರಿಸಿದರು. ಗ್ರಾ. ಪಂ. ಅಧ್ಯಕ್ಷ ಸುರೇಶ್‌, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸಂಪತ್, ಮಾಜಿ ಅಧ್ಯಕ್ಷ ಬೈರೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.