ADVERTISEMENT

‘ಮೊಯಿಲಿ ಪೈಪ್‌ಲೈನ್‌ ಯೋಜನೆ ಸೃಷ್ಟಿಕರ್ತ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:15 IST
Last Updated 10 ಮಾರ್ಚ್ 2014, 20:15 IST

ದೇವನಹಳ್ಳಿ: ಕೇಂದ್ರ ಸಚಿವ ವೀರಪ್ಪ ಮೊಯಿಲಿ ಎತ್ತಿನಹೊಳೆ ಪೈಪ್‌ಲೈನ್‌ ಯೋಜನೆಯ ಸೃಷ್ಟಿಕರ್ತ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮ­ರೆಡ್ಡಿ ವ್ಯಂಗ್ಯವಾಡಿದರು.

ತಾಲ್ಲೂಕಿನ ಲಕ್ಷ್ಮಿಪುರದ ಶ್ರೀ ಆಂಜ­ನೇಯ ಸ್ವಾಮಿ ದೇವಾಲಯದ ಆವರ­ಣದಲ್ಲಿ ಚುನಾವಣಾ ಪ್ರಚಾರ ಸಭೆ­ಯನ್ನುದ್ದೇಶಿಸಿ ಮಾತನಾಡಿದ ಅವರು, ಮೊಯಿಲಿ ಅವರು ಬಯಲು ಸೀಮೆಯ ಜನರ ಕಿವಿಗೆ ಹೂ ಇಡುವ ಕೆಲಸ­ಮಾಡಿದ್ದಾರೆ. ಇದೆಲ್ಲಾ ಚುನಾವಣೆಯ ಗಿಮಿಕ್‌ ಎಂದು ಜರಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್ವಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾ­ವಣೆ­ಯಲ್ಲಿ ಸಿಪಿಎಂ ಅಭ್ಯರ್ಥಿ ಜಿ.ವಿ.­ಶ್ರೀರಾಮ ರೆಡ್ಡಿಯವರನ್ನು  ಬೆಂಬ­­ಲಿಸಿ ಎಂದು ಮನವಿ ಮಾಡಿದರು.

ಚಿಕ್ಕ­ಬಳ್ಳಾಪುರ ಜಿಲ್ಲೆ ಸಿಪಿಎಂ ಘಟ­ಕದ ಅಧ್ಯಕ್ಷ ಗೋಪಿನಾಥ್, ಪ್ರಾಂತ ರೈತ ಸಂಘದ ಅಧ್ಯಕ್ಷ ವೀರಣ್ಣ, ಉಪಾ­ಧ್ಯಕ್ಷ ಮೋಹನ್ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.