ಬೆಂಗಳೂರು: ಮೈಸೂರು ರಸ್ತೆಯ ಗುಡ್ಡದ ಹಳ್ಳಿಯಲ್ಲಿರುವ ಉದ್ಯಮಿ ಧರ್ಮಸಿಂಗ್ ಎಂಬುವರ ಮನೆಯಲ್ಲಿ ಕಳ್ಳತನ ಎಸಗಿರುವ ದುಷ್ಕರ್ಮಿಗಳು, ₹1.5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ.
‘ಕೆಲಸ ಪ್ರಯುಕ್ತ ಶನಿವಾರ ಬೆಳಿಗ್ಗೆ ಧರ್ಮಸಿಂಗ್ ಕುಂಬಳಗೋಡಿಗೆ ಹೋಗಿದ್ದರು. ಮಕ್ಕಳು ಸೈಬರ್ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಧರ್ಮಸಿಂಗ್ ಅವರ ಪತ್ನಿ, ಮನೆಯ ಬೀಗದ ಕೀಯನ್ನು ಕಿಟಕಿಯಲ್ಲಿಟ್ಟು ಅಂಗಡಿಗೆ ಹೋಗಿದ್ದರು. ಅದನ್ನು ಗಮನಿಸಿದ್ದ ದುಷ್ಕರ್ಮಿಗಳು, ಬೀಗದ ಕೀ ಬಳಸಿ ಬಾಗಿಲು ತೆರೆದು ಒಳಗೆ ನುಗ್ಗಿದ್ದಾರೆ.‘
‘ಬೀರುವಿನಲ್ಲಿಟ್ಟಿದ್ದ 190 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಪತ್ನಿ ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ತಿಳಿಸಿದರು.
800 ಗ್ರಾಂ ಚಿನ್ನ ಕಳವು:ಬ್ಯಾಟರಾಯಪುರದ ಮುನೇಶ್ವರ ಬ್ಲಾಕ್ನಲ್ಲಿ ವಾಸವಿರುವ ಉದ್ಯಮಿ ಆನಂದ್ ಎಂಬುವರ ಮನೆಯ ಬೀಗ ಮುರಿದು ದುಷ್ಕರ್ಮಿ
ಗಳು ಕಳ್ಳತನ ಎಸಗಿದ್ದಾರೆ.
‘800 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಹಾಗೂ ₹6 ಲಕ್ಷ ನಗದು ಕಳುವಾಗಿರುವುದಾಗಿ ಅಂದಾಜಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.