ಬೆಂಗಳೂರು: ‘ಸುರಾನಾ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸಿದ ಜಿ.ಸಿ.ಸುರಾನಾ ಅವರ 77ನೇ ಹುಟ್ಟುಹಬ್ಬದ ಅಂಗವಾಗಿ ಏಪ್ರಿಲ್ 28ರಂದು ‘ಪರಿವರ್ತನೆಯ ನಾಯಕತ್ವ ಸಭೆ’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ’ ಎಂದು ಪ್ರಾಂಶುಪಾಲೆ ಶಾಕುಂತಲಾ ಸ್ಯಾಮ್ವೆಲ್ಸನ್ ಹೇಳಿದರು.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಯಶವಂತಪುರ ತಾಜ್ ವಿವಾಂತಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಜ್ಞರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡುತ್ತಾರೆ. ವೀರೇಂದ್ರ ಹೆಗ್ಗಡೆ ಅವರಿಗೆ ‘ಜೀವಮಾನ ಸಾಧನೆ’, ದರ್ಶನ್ ಶಂಕರ್ ಅವರಿಗೆ ‘ಟ್ರಾನ್ಸ್ಫಾರ್ಮೇಶನಲ್ ಲೀಡರ್ಶಿಪ್’, ಸಿ.ಎನ್.ಮಂಜುನಾಥ್ ಅವರಿಗೆ ‘ಅತ್ಯುತ್ತಮ ಆಡಳಿತಾಧಿಕಾರಿ’, ಶತಾವಧಾನಿ ಆರ್. ಗಣೇಶ ಅವರಿಗೆ ‘ಸಾಂಪ್ರದಾಯಿಕ ಜ್ಞಾನದ ರಕ್ಷಣೆ ಸಂರಕ್ಷಣೆ’ ಪ್ರಶಸ್ತಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಶದ 17 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.