ADVERTISEMENT

ಸಿದ್ದರಾಮಯ್ಯ ಅವಧಿಯಲ್ಲಿ ₹2,500 ಕೋಟಿ ಟಿಡಿಆರ್‌ ಹಗರಣ: ದಾಖಲೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 20:07 IST
Last Updated 20 ಮಾರ್ಚ್ 2023, 20:07 IST
ಎನ್‌.ಆರ್‌ ರಮೇಶ್‌
ಎನ್‌.ಆರ್‌ ರಮೇಶ್‌    

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹2,500 ಕೋಟಿಗೂ ಹೆಚ್ಚು ಮೊತ್ತದ ಟಿಡಿಆರ್‌ ಹಗರಣ ನಡೆದಿದೆ ಎಂದು 9,630 ಪುಟಗಳಷ್ಟು ದಾಖಲೆಯನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಅವರು ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರಮೇಶ್‌ ಅವರು, ‘ಈ ಹಗರಣದಲ್ಲಿ ಬಿಬಿಎಂಪಿ ಹಾಗೂ ಬಿಎಂಐಸಿಎಪಿಎಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ’ ಎಂದು ದೂರಿದರು.

‘ಪ್ರವೀಣ್ ಪಿ. ಷಾ ಪಾಲುದಾರರಾಗಿರುವ ವೆಂಕಟೇಶ್ವರ ಡೆವಲಪರ್ಸ್, ವಿಕ್ರಮ್ ಓಸ್ವಾಲ್ ಪಾಲುದಾರರಾಗಿರುವ ಬಾಲಾಜಿ ಇನ್‍ ಫ್ರಾಸ್ಟಕ್ಚರ್ಸ್ ಆ್ಯಂಡ್‌ ಡೆವಲಪರ್ಸ್, ಸಿ.ಟಿ. ತಿಮ್ಮಯ್ಯ, ಸಿ.ಟಿ. ಮರಿರಾಜು ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಮನಗರದ ಮಾಗಡಿಯ ಕೊಡಿಯಾಲ ಕರೇನ ಹಳ್ಳಿಯಲ್ಲಿ 40 ಎಕರೆ ಭೂಮಿ ಖರೀದಿಸಿ, ಬಿಬಿಎಂಪಿಗಾಗಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಈ ಸ್ವತ್ತನ್ನು ‘ಬೆಂಗಳೂರು - ಮೈಸೂರು ಮೂಲಸೌಕರ್ಯ ಮಾರ್ಗ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಮೂಲಕ ಬಿಬಿಎಂಪಿಗೆ ಹಸ್ತಾಂತರಿಸಿ ಟಿಡಿಆರ್‌ ನೀಡಬೇಕೆಂದು ಪ್ರಸ್ತಾವ ಸಲ್ಲಿಸಿದ್ದರು’ ಎಂದು ಹೇಳಿದರು.

ADVERTISEMENT

‘ಇದಾದ ಮೇಲೆ ಹಲವು ಹಿರಿಯ ಅಧಿಕಾರಿಗಳ ಸಹಾಯದಿಂದ ₹65 ಕೋಟಿ ಮೊತ್ತದ ಸ್ವತ್ತಿಗೆ ₹2,644 ಕೋಟಿ ಮೌಲ್ಯದ ಟಿಡಿಆರ್‌ ಅನ್ನುರಿಗ್‌ ‘ಎ’ನಲ್ಲಿ ಪಡೆದುಕೊಂಡಿದ್ದಾರೆ. ಇದು ಅತಿದೊಡ್ಡ ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.