ADVERTISEMENT

400 ಮಂದಿಗೆ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:54 IST
Last Updated 4 ಜುಲೈ 2017, 19:54 IST
ಎಸ್‌.ಟಿ.ಸೋಮಶೇಖರ್‌ ಗಿಡ ನೆಟ್ಟರು. ಕಾಂಗ್ರೆಸ್‌ ಮುಖಂಡರಾದ ರೋಹಿಣಿ ಸುರೇಶ್‌ ಇದ್ದಾರೆ
ಎಸ್‌.ಟಿ.ಸೋಮಶೇಖರ್‌ ಗಿಡ ನೆಟ್ಟರು. ಕಾಂಗ್ರೆಸ್‌ ಮುಖಂಡರಾದ ರೋಹಿಣಿ ಸುರೇಶ್‌ ಇದ್ದಾರೆ   

ಬೆಂಗಳೂರು: ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಯಶವಂತಪುರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವೈದ್ಯ ಡಾ.ಎಸ್‌.ಸಿ.ಶಂಕರಲಿಂಗಯ್ಯ ನೇತೃತ್ವದ ಎಂಟು ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

400 ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದರಲ್ಲಿ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದವರು ಹೆಚ್ಚಾಗಿದ್ದರು. ವನಮಹೋತ್ಸವಕ್ಕೆ ಶಾಸಕ ಎಸ್‌.ಟಿ. ಸೋಮಶೇಖರ್‌ ಚಾಲನೆ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಜನರಿಗೆ ಗಿಡಗಳನ್ನು ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.