ADVERTISEMENT

ಪಕ್ಷಿಗಳಿಗಾಗಿ ನೀರಿನ ತೊಟ್ಟಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ನೀರಿನ ತೊಟ್ಟಿಯನ್ನು ಆರ್‌.ಸಂಪತ್‌ ರಾಜ್‌ ವೀಕ್ಷಿಸಿದರು
ನೀರಿನ ತೊಟ್ಟಿಯನ್ನು ಆರ್‌.ಸಂಪತ್‌ ರಾಜ್‌ ವೀಕ್ಷಿಸಿದರು   

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಪಕ್ಷಿಗಳ ನೀರಿನ ದಾಹ ನೀಗಿಸುವ ಉದ್ದೇಶದಿಂದ ನಾಲ್ಕು ಸಣ್ಣ ತೊಟ್ಟಿಗಳನ್ನು ಅಳವಡಿಸಲಾಗಿದೆ.

ನಗರದ ಕೇಂದ್ರ ಭಾಗದ 50 ಕಡೆಗಳಲ್ಲಿ ತೊಟ್ಟಿಗಳನ್ನು ವಾರದೊಳಗೆ ಅಳವಡಿಸುವಂತೆ ತೋಟಗಾರಿಕೆ ವಿಭಾಗದ ಅಧಿಕಾರಿಗಳಿಗೆ ಮೇಯರ್‌ ಆರ್‌.ಸಂಪತ್‌ ರಾಜ್‌ ಸೂಚನೆ ನೀಡಿದರು.

ಈ ತೊಟ್ಟಿಗಳಿಗೆ ನಿತ್ಯ ನೀರು ತುಂಬಿಸುವ ಕೆಲಸವನ್ನು ವಲಯದ ಸಿಬ್ಬಂದಿಗೆ ವಹಿಸಬೇಕು, ಇವುಗಳಿಗೆ ಸ್ವಯಂಚಾಲಿತ ಶುದ್ಧೀಕರಣ ಯಂತ್ರದ ಮೂಲಕ ನೀರು ಪೂರೈಸಬೇಕು ಎಂದು ಸೂಚಿಸಿದರು.

ADVERTISEMENT

ನೀರಿನ ಅಭಾವದಿಂದ ಪಕ್ಷಿ ಸಂಕುಲ ನಾಶವಾಗುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪಾಲಿಕೆಯ ಎಲ್ಲ ಸದಸ್ಯರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.