ADVERTISEMENT

ಕಾರು ರ‍್ಯಾಲಿ: ಅಂಗವಿಕಲರ ಚಾಕಚಕ್ಯತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಕಾರು ರ‍್ಯಾಲಿಯಲ್ಲಿ ಪಾಲಿಕೆ ಸದಸ್ಯ ನಾಗರಾಜು, ನಟಿ ಮಯೂರಿ, ಅಂಗವಿಕಲರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು
ಕಾರು ರ‍್ಯಾಲಿಯಲ್ಲಿ ಪಾಲಿಕೆ ಸದಸ್ಯ ನಾಗರಾಜು, ನಟಿ ಮಯೂರಿ, ಅಂಗವಿಕಲರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು   

ಬೆಂಗಳೂರು: ಬ್ಲಿಸ್ ಆ್ಯಂಡ್ ಸ್ಮೈಲ್ ಸಂಸ್ಥೆ ಹಾಗೂ ಕೌಸ್ತುಭ ಪ್ರತಿಷ್ಠಾನದ ಸಹಯೋಗದಲ್ಲಿ ಅಂಗವಿಕಲರು ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಭಾನುವಾರ ಕಾರು ರ‍್ಯಾಲಿ ನಡೆಸಿದರು.

ಭೈರಸಂದ್ರ ಪಾಲಿಕೆ ಸದಸ್ಯಎನ್.ನಾಗರಾಜು ಹಾಗೂ ನಟಿ ಮಯೂರಿ ಅವರು ರ‍್ಯಾಲಿಗೆ ಚಾಲನೆ ನೀಡಿದರು. ಮೈದಾನದ ಬಳಿಯಿಂದ ಹೊರಟ ರ‍್ಯಾಲಿಯು ಜಯನಗರ 4ನೇ ಹಂತ, ಸೌತ್ ಎಂಡ್ ವೃತ್ತ, ಜೆ.ಪಿ.ನಗರದ ಮೂಲಕ ಸಾಗಿ ಅದೇ ಮಾರ್ಗದ ಮೂಲಕ ಮೈದಾನವನ್ನು ಸೇರಿತು.

ಅಂಧರು, ಅಂಗವಿಕಲರು ಬ್ರೈಲ್ ನಕ್ಷೆ ಬಳಸಿ, ಸಹಾಯಕರ ನೆರವಿನಿಂದ ಕಾರು ಚಲಾಯಿಸಿ ಚಾಕಚಕ್ಯತೆ ಮೆರೆದರು. ಅಂಗವಿಕಲರಿಗೆ ರಸ್ತೆಯಲ್ಲಿ ಸುರಕ್ಷತೆ ಕಲ್ಪಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.