ADVERTISEMENT

ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:38 IST
Last Updated 17 ಜನವರಿ 2018, 19:38 IST
ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’
ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’   

ಬೆಂಗಳೂರು: ನಮ್ಮೊಳಗೆ ಸುಪ್ತವಾಗಿರುವ ಕಲೆಗಳನ್ನು ಹೊರತರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಎಂದು ಮನೋವೈದ್ಯ ಡಾ. ಕೆ. ಆರ್. ಶ್ರೀಧರ್ ತಿಳಿಸಿದರು.

ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ‘ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಸ್ತೋತ್ರಗಾಯನ, ಛದ್ಮವೇಷ, ಭಗವದ್ಗೀತೆ, ಏಕಪಾತ್ರಾಭಿನಯ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ, ಹಿರಿಯರಿಗೆ ರಂಗೋಲಿ ಬಿಡಿಸುವುದು, ಸಾಂಪ್ರದಾಯಿಕ ಗೀತೆ ಹಾಡುವುದು, ಸವಿ ರುಚಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹವ್ಯಕ ಕಲಾವಿದರ ನಾದ-ನಿನಾದ, ಯಕ್ಷ ನೃತ್ಯ, ಕೋಲಾಟ, ಹಾಸ್ಯ ಕಾರ್ಯಕ್ರಮಗಳು ಕಲಾಭಿಮಾನಿಗಳನ್ನು ರಂಜಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.